ಆಂಜನೇಯ ಗುಡಿಗೆ ನುಗ್ಗಿದ ಆಗಂತುಕನ ಪತ್ತೆ

0

ಸುಬ್ರಹ್ಮಣ್ಯ ಪೊಲೀಸರ ಕಾರ್ಯಾಚರಣೆ



ಸುಬ್ರಹ್ಮಣ್ಯದ ಆಂಜನೇಯ ಗುಡಿಗೆ ನ.೯ ರ ರಾತ್ರಿ ನುಗ್ಗಿದ ಆಗಂತುಕನನ್ನು ಸುಬ್ರಹ್ಮಣ್ಯ ಪೊಲೀಸರು ಪತ್ತೆ ಹಚ್ಚಿ ಕರೆತಂದ ಘಟನೆ ವರದಿಯಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕೊಳ ಪಟ್ಟ ಆಂಜನೇಯ ಗುಡಿಗೆ ನ.೯ ರಂದು ತಡ ರಾತ್ರಿ ಯುವಕನೊಬ್ಬ ಬೀಗ ಹಾಕಿದ್ದ ಗೇಟು ಹತ್ತಿ ದಾಟಿ ನುಗ್ಗಿ ಗುಡಿಯ ಬಳಿ ಇದ್ದ ಕಾರ್ಯಾಲಯದಲ್ಲಿ ಡ್ರವರ್ ತಡಕಾಡಿರುವ ಬಗ್ಗೆ ತಿಳಿದು ಬಂದಿತ್ತು. ಈ ಬಗ್ಗೆ ದೇವಸ್ಥಾನ ವತಿಯಿಂದ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಕಾರ್ಯಾಚರಣೆ ಗಿಳಿದ ಸುಬ್ರಹ್ಮಣ್ಯ ದ ಎಸ್ ಐ ಕಾರ್ತಿಕ್, ಪೊಲೀಸರು ಗುಡಿಯೊಳಗೆ ನುಗ್ಗಿದ ಯುವಕನನ್ನು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನೆರಿಯ ಬಳಿ ಪತ್ತೆ ಹಚ್ಚಿದ್ದಾರೆ. ಗದಗ ಮೂಲದವನಾಗಿದ್ದು ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಯುವಕ ತನ್ನ ಕೃತ್ಯವನ್ನು ಪೋಲಿಸರ ಹಾಗೂ ದೇವಸ್ಥಾನದವರ ಮುಂದೆ ಒಪ್ಪಿಕೊಂಡಿದ್ದು ಸುಬ್ರಹ್ಮಣ್ಯ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ಯುವಕನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.