ಜಾಲ್ಸೂರು ಡಿಸಿಸಿ ಬ್ಯಾಂಕಿನಲ್ಲಿ ಗಣಪತಿ ಹವನ ಮತ್ತು ಧನಲಕ್ಷ್ಮಿ ಪೂಜೆ

0

ಜಾಲ್ಸೂರು ಡಿಸಿಸಿ ಬ್ಯಾಂಕಿನಲ್ಲಿ ಗಣಪತಿ ಹವನ ಮತ್ತು ಧನಲಕ್ಷ್ಮಿ ಪೂಜೆ ಅರ್ಚಕ ರಾಮಕೃಷ್ಣ ಭಟ್ ನೇತೃತ್ವದಲ್ಲಿ ನ. ೧೫ ರಂದು ನಡೆಯಿತು.

ಶಾಖಾ ವ್ಯವಸ್ಥಾಪಕ ಚಂದ್ರಶೇಖರ ಶೆಟ್ಟಿ, ಸಿಬ್ಬಂದಿಗಳಾದ ಸುದೀಶ್ ಅಡ್ಕಾರು, ಸುಮಂತ್, ಶಶಿಕಲಾ, ನವೀನ್ ಕುಮಾರ್, ರಿಕವರಿ ಆಫೀಸರ್ ರತ್ನಕುಮಾರ್, ಪಿಗ್ಮಿ ಸಂಗ್ರಹಕರುಗಳಾದ ಶೇಖರ ಕಾಳಮನೆ, ದೀಕ್ಷಿತ ಕೋನಡ್ಕ ಪದವು, ನವೋದಯ ಸಂಘದ ಪ್ರೇರಕರಾದ ಶ್ರೀಮತಿ ಸುಗಂಧಿ, ಭಾಗೀರಥಿ, ಗ್ರಾಹಕರುಗಳಾದ ಸುಂದರೇಶ್ ಭಟ್, ಶ್ರೀರಾಮ್ ಭಟ್, ಗಂಗಾಧರ ಶೆಟ್ಟಿ, ರಾಜಿವ್ ಶೆಟ್ಟಿ, ರಾಧಾಕೃಷ್ಣ, ನಿಶಾಂತ್ ಎಂ.ಆರ್ ಹಲವಾರು ಗ್ರಾಹಕರು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.