ಮಡಪ್ಪಾಡಿ ಯುವಕ ಮಂಡಲದ ಮಹಾಸಭೆ-ನೂತನ ಪದಾಧಿಕಾರಿಗಳ ಆಯ್ಕೆ

0

ನೂತನ ಅಧ್ಯಕ್ಷರಾಗಿ ಕಿರಣ್ ಶೀರಡ್ಕ, ಕಾರ್ಯದರ್ಶಿಯಾಗಿ ಪ್ರೆಕ್ಷೀತ್ ಬೊಮ್ಮೆಟ್ಟಿ, ಖಜಾಂಜಿ ರಂಜಿತ್ ಬೊಮ್ಮೆಟ್ಟಿ

ಯುವಕ ಮಂಡಲ ಮಡಪ್ಪಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ 2023-24 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನ.12ರಂದು ಯುವಕ ಮಂಡಲ ಸಭಾಭವನ ಮಡಪ್ಪಾಡಿ ಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಲದ ಅಧ್ಯಕ್ಷರಾದ ಧನ್ಯಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಸಂಯುಕ್ತ ಮಂಡಲಿ ಸುಳ್ಯ ಇದರ ನಿರ್ದೇಶಕರಾದ ಲೋಹಿತ್ ಬಾಳಿಕಳ ಉಪಸ್ಥಿತರಿದ್ದರು.


ಗೌರವಾದ್ಯಕ್ಷರಾಗಿ ಧನ್ಯಕುಮಾರ್ ದೇರುಮಜಲು, ಅಧ್ಯಕ್ಷರಾಗಿ ಕಿರಣ್ ಶೀರಡ್ಕ, ಕಾರ್ಯದರ್ಶಿಯಾಗಿ ಪ್ರೆಕ್ಷೀತ್ ಬೊಮ್ಮೆಟ್ಟಿ, ಖಜಾಂಜಿಯಾಗಿ ರಂಜಿತ್ ಬೊಮ್ಮೆಟ್ಟಿ, ಉಪಾದ್ಯಕ್ಷರಾಗಿ ತನುರಾಜ್ ಅಂಬೆಕಲ್ಲು, ಜೊತೆ ಕಾರ್ಯದರ್ಶಿಯಾಗಿ ಸುಯೋಗ್ ವಾಲ್ತಾಜೆ, ಸಾಂಸ್ಕೃತಿಕ ಕಾರ್ಯಯಾಗಿ ದುಶ್ಯಂತ್ ಶೀರಡ್ಕ, ಕ್ರೀಡಾ ಕಾರ್ಯದರ್ಶಿಯಾಗಿ ಕಿಶನ್ ಅಂಬೆಕಲ್ಲು, ನಿರ್ದೇಶಕರಾಗಿ ರಂಜಿತ್ ಅಂಬೆಕಲ್ಲು, ವಿನ್ಯಾಸ್ ಪಾರೆಮಜಲು, ಸುಮಂತ್ ಶೀರಡ್ಕ, ಯಕ್ಷೀತ್ ಬೊಮ್ಮೆಟ್ಟಿ, ರಕ್ಷಿತ್ ಶೀರಡ್ಕ, ಸುಬ್ರಹ್ಮಣ್ಯ ಬೊಮ್ಮೆಟ್ಟಿ, ಮನ್ವಂತ್ ಗೋಳ್ಯಾಡಿ, ಮನ್ಮಥ ಅಂಬೆಕಲ್ಲು, ಸುಜನ್ ಅಂಬೆಕಲ್ಲು, ದಿಲೀಪ್ ಶೀರಡ್ಕ, ಕುಶನ್ ಅಂಬೆಕಲ್ಲು, ಸುಪ್ರಿತ್ ಶೀರಡ್ಕ, ತೇಜಕುಮಾರ ನೆಲ್ಲಿಂಬಾಡಿ, ಪುನೀತ್ ಪಾರೆಮಜಲು, ವೇಣುಗೋಪಾಲ ಶೀರಡ್ಕ, ಚೇತನ್ ಕುಚ್ಚಾಲ, ಗೌರವ ಸಲಹೆಗಾರರಾಗಿ ವಿನಯಕುಮಾರ ಮುಳುಗಾಡು, ಸಚಿನ್ ಬಳ್ಳಡ್ಕ, ಕರುಣಾಕರ ಪಾರೆಪ್ಪಾಡಿ, ಹೇಮಕುಮಾರ ಹಾಡಿಕಲ್ಲು, ಲೋಹಿತ್ ಬಾಳಿಕಳ ಹಾಗೂ ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಧನ್ಯಕುಮಾರ್ ದೇರುಮಜಲು ಸ್ವಾಗತಿಸಿದರು. ಪ್ರೇಕ್ಷೀತ್ ಬೊಮ್ಮೆಟ್ಟಿ ವಂದಿಸಿದರು.