








ಶ್ರೀನಿಧಿ ಮಹಿಳಾ ಮಂಡಲ(ರಿ) ಕಾಯರ್ತೋಡಿ ಇದರ ಆಶ್ರಯದಲ್ಲಿ ಕಾಯರ್ತೋಡಿ ಅಂಗನವಾಡಿ ಕೇಂದ್ರದಲ್ಲಿ ಡಿ. 14 ರಂದು ಸಾರ್ವಜನಿಕ ಶ್ರೀಲಕ್ಷ್ಮಿ ಸಹಿತ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮ ನಡೆಯಿತು. ಅನೂಪ್ ಶರ್ಮರವರು ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪ್ರಿಯಾ ಬಳ್ಳಡ್ಕ, ಗೌರವಾಧ್ಯಕ್ಷೆ ಶ್ರೀಮತಿ ಕಲಾವತಿ ತೀರ್ಥರಾಮ, ಕಾರ್ಯದರ್ಶಿ ಶೃತಿ ಮಂಜುನಾಥ್, ಕೋಶಾಧಿಕಾರಿ ಶ್ರೀಮತಿ ಜಯಮಾಲ ಶಿವಪ್ರಕಾಶ್
ಪದಾಧಿಕಾರಿಗಳು ಮತ್ತು ಸರ್ವಸದಸ್ಯರು, ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ಶ್ರೀ ರಕ್ತೇಶ್ವರಿ ಕ್ಷೇತ್ರದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.



