ಸುಳ್ಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ರಸ್ತೆಗೆ ಬಂದ ಕೊಳಚೆ ನೀರು

0

ದುರ್ನಾತದಿಂದ ಕೂಡಿದ ಪರಿಸರ : ಸಾರ್ವಜನಿಕರ ಆಕ್ರೋಶ

ಸುಳ್ಯ ಕೆಎಸ್‌ಆರ್ಟಿಸಿ ಬಸ್ ನಿಲ್ದಾಣದ ಭಾಗದಿಂದ ಕೊಳಚೆ ನೀರು ಸಾರ್ವಜನಿಕರು ನಡೆದಾಡುತ್ತಿರುವ ರಸ್ತೆಗೆ ಬರುತ್ತಿದ್ದು ಪರಿಸರ ದುರ್ನಾತ ಬೀರಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಸುಳ್ಯದಿಂದ ನಾವೂರಿಗೆ ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಬಸ್ಸು ನಿಲ್ದಾಣದ ಕಾಂಪೌಂಡಿನಲ್ಲಿ ಅಳವಡಿಸಿರುವ ಪೈಪು ಮೂಲಕ ರಸ್ತೆಗೆ ಕೊಳಚೆ ನೀರು ಬರುತ್ತಿದ್ದು, ಮೇಲ್ನೋಟಕ್ಕೆ ಕೆಎಸ್‌ಆರ್ಟಿಸಿ ಬಸ್ಸು ನಿಲ್ದಾಣದ ಶೌಚಾಲಯದ ನೀರು ಹೊರ ಬರುತ್ತಿರುವಂತೆ ಕಾಣುತ್ತಿದೆ. ಇಂದು ಬೆಳಿಗ್ಗೆ ಈ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರು ಈ ಕೊಳಚೆ ನೀರು ಬರುತ್ತಿರುವುದನ್ನು ಕಂಡು ನಿಲ್ದಾಣದ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದಾರೆ. ಅವರು ಕೂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಸಂಬಂಧಪಟ್ಟ ಇಂಜಿನಿಯರ್‌ರಿಗೆ ಮಾಹಿತಿ ನೀಡಿ ಕೂಡಲೇ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ.