ಅಡ್ಕಾರ್ ಇಲೆಕ್ಟ್ರಾನಿಕ್ಸ್ ದಸರಾ -ದೀಪಾವಳಿ ಧಮಾಕ: ಬಂಪರ್ ಬಹುಮಾನ ವಿಜೇತರ ಆಯ್ಕೆ

0

ಸುಳ್ಯದ ಪ್ರಸಿದ್ಧ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಮಳಿಗೆ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದಸರಾ- ದೀಪಾವಳಿ ಧಮಾಕ ಸೇಲ್ ನ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯ ಬಂಪರ್ ಬಹುಮಾನ ವಿಜೇತರ ಆಯ್ಕೆ ಇಂದು ಸಂಜೆ ನಡೆಯಿತು.


ಪ್ರಥಮ ಬಂಪರ್ ಬಹುಮಾನ ಡೆಲ್ ಲ್ಯಾಪ್ ಟಾಪ್ ನ್ನು ಕೆ.ಪಿ.ಶಿವಪ್ರಸಾದ್ ಬೊಳುಬೈಲು, ದ್ವಿತೀಯ ಬಹುಮಾನ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ನ್ನು ಮಾನ್ವಿ ಎಸ್.ವಿ.ಅರಂತೋಡು, ತೃತೀಯ ಬಹುಮಾನ ರಾಕಿಂಗ್ ಚಯರ್ ನ್ನು ವಿವೇಕ್ ರೈ ಕಲ್ಲುಗುಂಡಿ ವಿಜೇತರಾದರು. ಸ್ಕ್ರಾಚ್ ಕಾರ್ಡ್ ಕೂಪನ್ ಡ್ರಾ ವನ್ನು ವಿನೋಬನಗರ ಶ್ರೀ ಗಣೇಶ್ ಕ್ಯಾಶ್ಯೂಸ್ ಮಾಲಕ ಸುಧಾಕರ ಕಾಮತ್, ಶ್ರೀ ಹರಿ ಕಾಂಪ್ಲೆಕ್ಸ್ ಮಾಲಕ ಕೃಷ್ಣ ಕಾಮತ್ ಅರಂಬೂರು ,ಚಾರ್ಟರ್ಡ್ ಅಕೌಂಟೆಂಟ್ ಶ್ರೀನಿಧಿ ಕಾಯರ್ತೋಡಿ ನೆರವೇರಿಸಿದರು. ಸುಳ್ಯ ಪಾಪ್ಯುಲರ್ ಸ್ವೀಟ್ಸ್ ಮಾಲಕ ಅನೂಪ್ ಪೈ, ಉದ್ಯಮಿ ಲ.ಜಯಂತ ರೈ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷೆ ಲ.ರೂಪಾಶ್ರೀ ಜೆ.ರೈ, ಸುದ್ದಿ ವರದಿಗಾರ ಶಿವಪ್ರಸಾದ್ ಕೇರ್ಪಳ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಶ್ರೀಮತಿ ಚೈತ್ರ ದಿನೇಶ್ ಅಡ್ಕಾರ್ ಹಾಗೂ ಮೋಹನ್ ಅಡ್ಕಾರ್ ಮತ್ತು ಸಿಬ್ಬಂದಿಗಳು ಇದ್ದರು. ಸುದ್ದಿ ವರದಿಗಾರ ರಮೇಶ್ ನೀರಬಿದಿರೆ ನಿರೂಪಿಸಿದರು.