ಸುಳ್ಯ: ಜೀರ್ಣೋದ್ಧಾರಗೊಳ್ಳುತ್ತಿರುವ ಬಂಗ್ಳೆಗುಡ್ಡೆ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

0

ಸುಳ್ಯದ ಬೀರಮಂಗಲದ ಬಂಗ್ಳೆಗುಡ್ಡೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಅವರು ನ.20ರಂದು ಭೇಟಿ ನೀಡಿದರು. ದೈವಸ್ಥಾನದ ಜೀರ್ಣೋದ್ಧಾರ ಕೆಲಸ ಕಾರ್ಯಗಳು ಜರುಗುತ್ತಿದ್ದು, ದೈವ ಸಾನಿಧ್ಯದಲ್ಲಿ ಬಿರ್ಮೆರ್ ಗುಂಡ, ಮೊಗೇರ್ಕಳ ದೈವಸ್ಥಾನ, ಕೊರಗ ತನಿಯ ಕಟ್ಟೆ, ಗುಳಿಗನ ಕಟ್ಟೆ, ತೀರ್ಥಬಾವಿ, ಆವರಣಗೋಡೆ, ಮಿನಿಹಾಲ್ ಕಛೇರಿ, ಉಗ್ರಾಣ, ಶೌಚಾಲಯ ಇತ್ಯಾದಿಗಳು ನಿರ್ಮಾಣಗೊಳ್ಳಲಿದ್ದು, ಅನುದಾನಕ್ಕಾಗಿ ಈ ಸಂದರ್ಭದಲ್ಲಿ ದೈವಸ್ಥಾನದ ಸಮಿತಿಯ ವತಿಯಿಂದ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರುಗಳಾದ ಎಸ್.ಎನ್. ಮನ್ಮಥ, ಎನ್.ಎ. ರಾಮಚಂದ್ರ, ಸಂತೋಷ್ ಜಾಕೆ, ದಿನೇಶ್ ಅಡ್ಕಾರು, ದೈವಸ್ಥಾನದ ಗುರಿಕಾರರಾದ ಮೋಹನ್ ಬಂಗ್ಳೆಗುಡ್ಡೆ, ರಾಜೇಶ್ ನಾಯಕ್ ಸೇರಿದಂತೆ ದೈವಸ್ಥಾನದ ಪದಾಧಿಕಾರಿಗಳು ಹಾಗೂ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.