ನಿಂತಿಕಲ್ಲು : ಶ್ರೀ ಲಕ್ಷ್ಮೀ ನರಸಿಂಹ ಎಂಟರ್ಪ್ರೈಸಸ್ ಎರಡನೇ ವರ್ಷಕ್ಕೆ ಪಾದಾರ್ಪಣೆ, ವೈದಿಕ ಕಾರ್ಯಕ್ರಮ

0

ನಿಂತಿಕಲ್ಲಿನಲ್ಲಿರುವ ಜನಾರ್ದನ ಪೂಜಾರಿ ಅಲೆಕ್ಕಾಡಿ ಮತ್ತು ಸುಮಂತ್ ಅಲೆಕ್ಕಾಡಿಯವರ ಮಾಲಕತ್ವದ ಶ್ರೀ ಹರ್ಷ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಲಕ್ಷ್ಮೀ ನರಸಿಂಹ ಎಂಟರ್ಪ್ರೈಸಸ್ ಎರಡನೇ ವರ್ಷಕ್ಕೆ ಪಾದಾರ್ಪಣೆಗೈಯುವ ಸಲುವಾಗಿ ವೇದಮೂರ್ತಿ ಪ್ರಶಾಂತ್ ಪರ್ಲತ್ತಾಯರ ಪೌರೋಹಿತ್ಯದಲ್ಲಿ ಗಣಪತಿ ಹವನ ಶ್ರೀ ಲಕ್ಷ್ಮಿ ಪೂಜೆ ನಡೆಯಿತು.


ಈ ಸಂದರ್ಭದಲ್ಲಿ ಮಾಲಕರಾದ ಜನಾರ್ದನ ಪೂಜಾರಿ, ಸುಮಂತ್ ಅಲೆಕ್ಕಾಡಿ, ತಿರುವಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು, ಮಯೂರ ಜ್ಯುವೆಲ್ಲರಿ ಮಾಲಕ ದೀಕ್ಷಿತ್ ಬೆಳ್ಳಾರೆ, ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ರಾಮಚಂದ್ರ ಭಟ್ ದೇವಸ್ಯ, ಶ್ರೀಕರ ಆಚಾರ್ಯ, ರಾಮಚಂದ್ರ ಭಟ್, ವಿಠಲ ರೈ ಪೋಳಜೆ, ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ವರ ಪೂದೆ, ನಿಂತಿಕಲ್ಲು ವಾಹನ ಚಾಲಕರು, ಮಾಲಕರು, ವರ್ತಕರು, ಗ್ರಾಹಕರು ಉಪಸ್ಥಿತರಿದ್ದರು.

ಇಲ್ಲಿ ಎಲ್ಲಾ ತರಹದ ಹಾರ್ಡ್ವೇರ್ ಐಟಂ, ಪಿವಿಸಿ ಪೈಪು, ಪೈಪ್ ಪಿಟ್ಟಿಂಗ್, ಸಿಮೆಂಟ್, ಸಿಮೆಂಟ್ ಪ್ರೊಡಕ್ಟ್, ಮನೆ ನಿರ್ಮಾಣದ ಪರಿಕರಗಳು, ಕಬ್ಬಿಣದ ಕಂಬಗಳು, ವಾಟರ್ ಟ್ಯಾಂಕ್, ಸ್ಯಾನಿಟರಿ ಐಟಂ, ಪ್ಲಾಸ್ಟಿಕ್ ಐಟಂ, ಅಲ್ಲದೆ ಕೃಷಿಕರ ಮಿತ ದರದಲ್ಲಿ ಸೇವಾ ಸೌಲಭ್ಯಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.