ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ : ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಸ್ಫರ್ಧಾ ಕಾರ್‍ಯಕ್ರಮ-ಆಕರ್ಷಣ್ 2023

0


ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಪಿ.ಯುಸಿ ವಿದ್ಯಾರ್ಥಿಗಳಿಗಾಗಿ ವಿವಿಧಾ ವಿಭಾಗಗಳಲ್ಲಿ ಸ್ಫರ್ಧಾ ಕಾರ್ಯಕ್ರಮ ಆಕರ್ಷನ್ ೨೦೨೩ ಕಾರ್‍ಯಕ್ರಮವು ಡಿ. ೦೨ರಂದು ಕಾಲೇಜಿನ ಆವರಣದಲ್ಲಿ ನಡೆಯಿತು.


ನಿವೃತ್ತ ಪ್ರಾಂಶುಪಾಲರಾದ ಚಂದ್ರಶೇಖರ ಕಾಂತಮಂಗಲ ಕಾರ್‍ಯಕ್ರಮವನ್ನು ಉದ್ಗಾಟಿಸಿ ಮಾತನಾಡುತ್ತ, ವಿದ್ಯಾರ್ಥಿಗಳ ಮುಂದೆ ಗುರಿ ಇರಬೇಕು ಹಿಂದೆ ಗುರುಗಳ ತಂದೆ ತಾಯಿಯರ ಆಶರ್ವಾದವಿರಬೇಕು. ಹಾಗಾದಾಗ ನಮ್ಮ ಪ್ರಯತ್ನಕ್ಕೆ ಜಯವಿರುತ್ತದೆ. ಸರಕಾರಿ ಕೆಲಸಕ್ಕೆ ಸೇರುವವರ ಸಂಖ್ಯೆ ನಮ್ಮಲ್ಲಿ ವಿರಳ ಇದೆ. ಸದಾ ನಾವು ಪ್ರಯತ್ನಶೀಲರಾಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಲತಾ, ಐಕ್ಯೂಎ.ಸಿ ಸಂಚಾಲಕರಾದ ಡಾ ಜಯಶ್ರೀ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉದಯಶಂಕರ ಹೆಚ್ ವಿದ್ಯಾರ್ಥಿ ಪ್ರತಿನಿಧಿಗಳಾದ ಸೌಂದರ್ಯ ಉಡುಪ,ತೇಜಸ್ವಿನಿ ವಿಜೇತ್ ಶ್ರೀಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

ಡಾ ಜಯಶ್ರೀ ಸ್ವಾಗತಿಸಿ,ಉದಯಶಂಕರ್ ವಂದಿಸಿದರು. ವಿದ್ಯಾರ್ಥಿ ಪ್ರತಿಕ್ಷಾ ಕಾರ್‍ಯಕ್ರಮ ನಿರೂಪಿಸಿದರು.