ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗೆ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆ.ಎಂ.ಬಿ.ಯವರಿಂದ ಡಿಜಿಟಲ್ ಬೋರ್ಡ್ ಕೊಡುಗೆ

0

ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕೆಎಂಬಿ ಮತ್ತು ಶ್ರೀಮತಿ ಇಂದಿರಾರವರು ತಮ್ಮ ಮಕ್ಕಳು ವಿದ್ಯಾಭ್ಯಾಸ ಪಡೆದ ನೆನಪಿಗಾಗಿ ವಿದ್ಯಾಸಂಸ್ಥೆಗೆ ಡಿಜಿಟಲ್ ಬೋರ್ಡನ್ನು ಕೊಡುಗೆಯಾಗಿ ನೀಡಿದರು.
ಸಂಸ್ಥೆಯ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ಡಿಜಿಟಲ್ ಬೋರ್ಡನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಉಮೇಶ್ ಕೆ.ಎಂ.ಬಿಯವರ ಪುತ್ರಿ ವೀಕ್ಷಿತಾ , ಪುತ್ರ ವಿಶಾಲ್ ಹಾಗೂ ಹಲವು ಜನ ಗಣ್ಯರು ಉಪಸ್ಥಿತರಿದ್ದರು.