ಮರ್ಕಂಜ : ಪನಿವಾರ ಶ್ರೀ ಗುಳಿಗ ಸಾನಿಧ್ಯದಲ್ಲಿ ತಂಬಿಲ‌ ಸೇವೆ

0

ಮರ್ಕಂಜದ ಪನಿವಾರದ ಕಾರಣಿಕ‌ ಸಾನಿಧ್ಯವೆಂದು ಹೆಸರಾಗಿರುವ ಪನಿವಾರ ಶ್ರೀ‌ ಗುಳಿಗ ಸಾನಿಧ್ಯ ಮತ್ತು ನಾಗ ಸಾನಿಧ್ಯದಲ್ಲಿ ಗುಳಿಗ ದೈವಕ್ಕೆ ತಂಬಿಲ ಸೇವೆಯು ಇಂದು ನೆರವೇರಿತು.
ಇದೇ ಸಂದರ್ಭದಲ್ಲಿ ಹರಕೆಯ ಮತ್ತು ಭಕ್ತಿಯ 40 ಅಗೇಲು ಶ್ರೀ ದೈವಕ್ಕೆ ಸಮರ್ಪಣೆ ಮಾಡಲಾಯಿತು.

ಸಾನಿಧ್ಯದ ಪ್ರಧಾನ ಕಾರ್ಯದರ್ಶಿ ಶಾಂತಪ್ಪ ರೈ ಅಂಗಡಿಮಜಲು ಪ್ರಾರ್ಥನೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮರ್ಕಂಜದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ, ಪ್ರಮುಖರಾದ ವೆಂಕಟ್ರಮಣ ಅಂಗಡಿಮಜಲು, ಲಿಂಗಪ್ಪ ನಾಯ್ಕ ತೋಟಚಾವಡಿ, ಮಹೇಶ್ ಪುರ, ಚೆನ್ನಕೇಶವ ದೋಳ, ಸುದರ್ಶನ ಕೊಯಿಂಗೋಡಿ, ನೆಲ್ಲೂರು ಕೆಮ್ರಾಜೆ ಸೊಸೈಟಿ ನಿವೃತ್ತ ಸಿಇಒ ಜಗನ್ನಾಥ ಶೆಟ್ಟಿ ಉಬರಡ್ಕ ಸೇರಿದಂತೆ ಸಾನಿಧ್ಯದ ಭಕ್ತಾಧಿಗಳು ಉಪಸ್ಥಿತರಿದ್ದರು.