ಕನಕಮಜಲು ಶ್ರೀ ಆತ್ಮಾರಾಮ ಭಜನಾ ಮಂದಿರಕ್ಕೆ ಅಯೋಧ್ಯೆಯ ಮಂತ್ರಾಕ್ಷತೆ

0

ಡಿ. 31ರವರೆಗೆ ಪ್ರತಿದಿನ ಸಂಜೆ ಶ್ರೀರಾಮ ರಕ್ಷಾ ಸ್ತೋತ್ರ ಪಠಣ ಜ.1ರಿಂದ ಪ್ರತೀ ಹಿಂದೂಗಳ ಮನೆಗೆ ವಿತರಣೆ

ಅಯೋಧ್ಯೆಯ ರಾಮಜನ್ಮಾಭೂಮಿಯಲ್ಲಿ ಜನವರಿ ತಿಂಗಳಿನಲ್ಲಿ ಪವಿತ್ರ ಶ್ರೀರಾಮ ಮಂದಿರದ ಉದ್ಘಾಟನೆ ಜರುಗಲಿದ್ದು, ಆ ಪ್ರಯುಕ್ತ ಮಂತ್ರಾಕ್ಷತೆಯು ಪ್ರತೀ ದೇಗುಲಗಳಿಗೆ ತಲುಪುತ್ತಿದ್ದು, ಡಿ.5ರಂದು ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರಕ್ಕೆ ಮಂತ್ರಾಕ್ಷತೆ ತಲುಪಿದ್ದು , ಪೂಜೆ ನೆರವೇರಿಸಲಾಯಿತು.

ಡಿ.5ರಿಂದ ಡಿ.31ರವರೆಗೆ ಶ್ರೀ ಆತ್ಮಾರಾಮ ಭಜನಾ ಮಂದಿರದಲ್ಲಿ ಪ್ರತಿದಿನ ಸಂಜೆ 6.45ರಿಂದ 7 ಗಂಟೆಯವರೆಗೆ 15 ನಿಮಿಷಗಳ ಕಾಲ ಶ್ರೀರಾಮ ರಕ್ಷಾಸ್ತೋತ್ರ ಪಠಣ ನಡೆಯಲಿದ್ದು, ಜ.1ರಿಂದ ಪ್ರತೀ ಹಿಂದೂಗಳ ಮನೆಗೆ ಮಂತ್ರಾಕ್ಷತೆ ತಲುಪಿಸಲಾಗುವುದು ಎಂದು ತಿಳಿದುಬಂದಿದೆ.