ಬಡ್ಡಡ್ಕ ದಿ.ಪಾರ್ವತಿವಾಸಪ್ಪ ಗೌಡ ಕುದ್ಕುಳಿಯವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮ

0

ಆಲೆಟ್ಟಿ ಗ್ರಾಮದ ಬಡ್ಡಡ್ಕ ನಿವಾಸಿ ದಿ.ವಾಸಪ್ಪ ಗೌಡ ಕುದ್ಕುಳಿ ಯವರ ಧರ್ಮಪತ್ನಿ ಶ್ರೀಮತಿ ಪಾರ್ವತಿ ವಾಸಪ್ಪ ಗೌಡ ಕುದ್ಕುಳಿ ಯವರು ನ.29 ರಂದು ನಿಧನರಾಗಿದ್ದು ಅವರ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ರಮವು ಬಡ್ಡಡ್ಕ ಸ್ವಗೃಹದಲ್ಲಿ
ಡಿ.9 ರಂದು ನಡೆಯಿತು.

ಕುಟುಂಬದ ಹಿರಿಯರಾದ ಮುಕುಂದ ಗೌಡ ಪೆರಾಜೆ ಯವರು ಮೃತರ ಜೀವನಗಾಥೆಯ ಕುರಿತು ತಿಳಿಸಿದರು. ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎನ್.ಎ.ಜ್ಞಾನೇಶ್ ಹಾಗೂ ಕುಮಾರಸ್ವಾಮಿ ಶಾಸ್ತ್ರಿ ಬೆಂಗಳೂರು ರವರು ನುಡಿನಮನ ಸಲ್ಲಿಸಿದರು.
ಮೃತರ ಹಿರಿಯ ಪುತ್ರ ಮೈಸೂರಿನ ಮಹಾರಾಣಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಕೆ.ವಿ.ಪ್ರಭಾಕರ ರವರು ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಅಪರ್ಣಾ ಪ್ರಭಾಕರ ಮೈಸೂರು, ಉದ್ಯಮಿ ಕೆ.ವಿ.ಪ್ರಕಾಶ್ ಬಡ್ಡಡ್ಕ, ಶ್ರೀಮತಿ ಶುಭ ಪ್ರಕಾಶ್,ಪುತ್ರಿ ಶ್ರೀಮತಿ ಪ್ರೇಮಾ ಶೇಷಪ್ಪ ಮಾಸ್ತರ್ ಕಳಗಿ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಉಪಸ್ಥಿತರಿದ್ದರು. ಹಿರಿಯರಾದ ಶ್ರೀಮತಿ ವೇದಾವತಿ ಅನಂತ ಬಡ್ಡಡ್ಕ ರವರು ಸೇರಿದಂತೆ ಬಂಧು ಮಿತ್ರರು ಆಗಮಿಸಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಶ್ರದ್ಧಾಂಜಲಿ ಕೋರಿದರು.