ಡಿ. 14: ಕಳಂಜ ಬಾಳಿಲ ಸಹಕಾರಿ ಸಂಘದ ಬಾಳಿಲ ಶಾಖೆಯಲ್ಲಿ ನವೀಕೃತ ಜಿನಸು ವಿಭಾಗದ ಉದ್ಘಾಟನೆ

0

ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಬಾಳಿಲ ಶಾಖೆಯಲ್ಲಿ ನವೀಕೃತಗೊಂಡ ಜಿನಸು ವಿಭಾಗ ಸಹಕಾರಿ ಭಂಡಾರದ ಉದ್ಘಾಟನಾ ಸಮಾರಂಭ ಡಿ. 14ರಂದು ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ.


ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪು ವಹಿಸಲಿದ್ದಾರೆ. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಸಹಕಾರಿ ಭಂಡಾರವನ್ನು ಉದ್ಘಾಟಿಸಲಿದ್ದಾರೆ. ದೇವರಕಾನ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ. ಪಿ. ರಾಮಚಂದ್ರ ಭಟ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನ, ಸಂಘದ ಮಾಜಿ ಅಧ್ಯಕ್ಷ ವಾರಣಾಶಿ ಗೋಪಾಲಕೃಷ್ಣ, ಪುತ್ತೂರು ಉಪವಿಭಾಗ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ತ್ರಿವೇಣಿ ರಾವ್ ಕೆ, ಮಾಜಿ ಜಿ.ಪಂ. ಅಧ್ಯಕ್ಷ ಡಿ. ಚಂದ್ರಶೇಖರ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಶುಭಾರಂಭ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆ

ಸಂಘದ ಜಿನಸು (ಸುಪರ್ ಮಾರ್ಕೆಟ್) ವಿಭಾಗದಲ್ಲಿ ಶುಭಾರಂಭದ ದಿನವಾದ ಡಿ. 14ರಂದು ಅಕ್ಕಿ, ಹಿಂಡಿ ಹೊರತು ಪಡಿಸಿ ಉಳಿದಂತೆ ಸಾಮಾಗ್ರಿಗಳನ್ನು ರೂ. 500/-ಕ್ಕಿಂತ ಮೇಲ್ಪಟ್ಟು ಖರೀದಿಸಿದ ಗ್ರಾಹಕರಿಗೆ ವಿಶೇಷ ಉಚಿತ ಕೂಪನ್ ನೀಡಲಾಗುವುದು. ಈ ಕೂಪನ್ ಮೂಲಕ ಒಂದು ತಿಂಗಳು ಶೇ. 5 ರಿಯಾಯಿತಿ ದರದಲ್ಲಿ ಸಾಮಾಗ್ರಿಗಳನ್ನು ಖರೀದಿಸಬಹುದು. ಒಂದು ತಿಂಗಳ ಬಳಿಕ ಮತ್ತೆ ರೂ. 500. ಕ್ಕಿಂತ ಮೇಲ್ಪಟ್ಟು ಸಾಮಾಗ್ರಿಗಳನ್ನು ಖರೀದಿಸಿದರೆ ಮತ್ತೆ ಒಂದು ತಿಂಗಳಿಗೆ ಕೂಪನ್ ನವೀಕರಣಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.