ಜಿಲ್ಲಾ ಮಟ್ಟದ ಮ್ಯಾರಥಾನ್ ಸ್ಪರ್ಧೆಯಲ್ಲಿ ಶ್ರೀಮತಿ ವಿದ್ಯಾ ಬಂಗಾರಕೋಡಿ ಅವರಿಗೆ ಪ್ರಶಸ್ತಿ

0

ಮಂಗಳೂರಿನಲ್ಲಿ ನಡೆದ ನಮ್ಮ ಕುಡ್ಲ ಮ್ಯಾರಥಾನ್ ನ ಹತ್ತು ಕಿ.ಮೀ. ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಹುಬ್ಬಳ್ಳಿಯಲ್ಲಿ ನಡೆದ 21 ಕಿ. ಮೀ. ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಶ್ರೀಮತಿ ವಿದ್ಯಾ ಬಂಗಾರಕೋಡಿ ಅವರು ಚಿನ್ನ ಮತ್ತು ಬೆಳ್ಳಿಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಡಿ.24ರಂದು ವಿಜಯಪುರದಲ್ಲಿ ನಡೆಯಲಿರುವ ಮ್ಯಾರಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಇವರು ಆಲೆಟ್ಟಿ ಗ್ರಾಮದ ರಂಗತ್ತಮಲೆ ಆರ್.ಕೆ. ಕೂಸಪ್ಪ ಹಾಗೂ ಶ್ರೀಮತಿ ಸಣ್ಣಮ್ಮ ದಂಪತಿಗಳ ಪುತ್ರಿ. ಪೆರಾಜೆ ಗ್ರಾಮದ ಬಂಗಾರಕೋಡಿ ಹರೀಶ್ ಅವರ ಪತ್ನಿ. ಈಕೆ ತೊಡಿಕಾನ ಒಕ್ಕೂಟದ ಆದಿಶಕ್ತಿ ಸಂಘದ ಸದಸ್ಯೆಯಾಗಿದ್ದು, ತೊಡಿಕಾನದ ಸ್ವರ್ಣಶ್ರೀ ಸ್ತ್ರೀಶಕ್ತಿ ಸಂಘದ ಸದಸ್ಯೆ.