ಕಮಲ ಮುತ್ಲಾಜೆ (ಕಾಯರ್‌ಮುಗೇರ್) ನಿಧನ

0

ಏನೆಕಲ್ಲು ಗ್ರಾಮದ ಮುತ್ಲಾಜೆ (ಕಾಯರ್‌ಮುಗೇರ್) ಕಮಲ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಡಿ.16 ರಂದು‌ ನಿಧನರಾದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಉಡುಪಿ ಜಿ.ಪಂ. ನಲ್ಲಿ ಕಂಪ್ಯೂಟರ್ ವಿಭಾಗದ ಸುಪರಿಟೆಂಡೆಂಟ್ ಆಗಿರುವ ರಾಮಚಂದ್ರ, ಶಿಕ್ಷಕ ವಸಂತ ಏನೆಕಲ್ಲು, ಮೂಡಬಿದಿರೆ ಆಳ್ವಾಸ್ ಪಿ.ಯು. ಕಾಲೇಜು ಉಪನ್ಯಾಸಕ ಲಕ್ಷ್ಮಣ ಏನೆಕಲ್, ಪುತ್ರಿಯರಾದ ಶ್ರೀಮತಿ ಪ್ರೇಮಾ ಸುಂದರ ಎಡಮಂಗಲ, ಶ್ರೀಮತಿ ಜಯಶ್ರೀ ಭಾಸ್ಕರ್ ಸಕಲೇಶಪುರ ಹಾಗೂ‌ ಕುಟುಂಬಸ್ಥರನ್ನು ಅಗಲಿದ್ದಾರೆ.