ತ್ಯಾಜ್ಯ ನದಿ ಬದಿಗೆ ಸುರಿಯಲು ನಾನು ಹೇಳಿಲ್ಲ‌ : ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ ಸ್ಪಷ್ಟನೆ

0

“ನಾಗಪಟ್ಟಣ ಸೇತುವೆಯ ಬಳಿ ತ್ಯಾಜ್ಯ ಹಾಕಿರುವುದು ಸರಿಯಲ್ಲ. ಮತ್ತು ಅಲ್ಲಿ ಹಾಕಿ ಎಂದು ನಾನು ಹೇಳಿಯೂ ಇಲ್ಲ” ಎಂದು ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡ ಸ್ಪಷ್ಟನೆ ನೀಡಿದ್ದಾರೆ.

ನಾಗಪಟ್ಟಣ ನದಿಯ ಬದಿ ಗುತ್ತಿಗೆದಾರರು ತ್ಯಾಜ್ಯ ಎಸೆದಿದ್ದು, ಸ್ಥಳೀಯರು ವಿಚಾರಿಸಿದಾಗ ವೆಂಕಪ್ಪ‌ ವಕೀಲರು ಹಾಕಲು‌ ಹೇಳಿದ್ದೆಂದು ಕಸ ಸುರಿದವರು ಹೇಳಿದ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ್ದಾರೆ.

“ನಾವು ಯಾರ ಬಳಿಯು ನದಿಯ ಬದಿಗೆ ತ್ಯಾಜ್ಯವನ್ನು ಸುರಿಯಿರಿ ಎಂದು ಹೇಳಲಿಲ್ಲ, ನಮ್ಮ ವಾರ್ಡಿನಲ್ಲಿ ಇದ್ದ ಕೊಳಚೆ ನೀರಿನ ಸಮಸ್ಯೆಗಳನ್ನು ಸರಿಪಡಿಸಿ ಶುಚಿತ್ವ ಗೊಳಿಸಿಕೊಡುವ ಬಗ್ಗೆ ಕೆಲಸಗಾರರಿಗೆ ನಾವು ಕೆಲಸವನ್ನು ನೀಡಿದ್ದೇವೆ ಹೊರತು ಇದನ್ನು ಇಂಥ ಕಡೆಗೆ ಸುರಿಯಿರಿ ಎಂದು ನಾವು ಹೇಳಲಿಲ್ಲ. ಈ ರೀತಿ ಆಗಿದ್ದು ಭಾರಿ ಬೇಸರ ತಂದಿದೆ. ಕೆಲಸಗಾರರು ಈ ರೀತಿ ಮಾಡಬಾರದಿತ್ತು. ಇದು ತೀರಾ ತಪ್ಪು. ಹೀಗೆ ಆದುದಕ್ಕೆ ನಾನು ಕಾರಣವಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.