ಪಂಜ ಹಾಲು ಉತ್ಪಾದಕರ ಸಹಕಾರ ಸಂಘ:ಅಧ್ಯಕ್ಷರಾಗಿ ಭಾಸ್ಕರ್ ನಾಯಕ್ ಬೇರ್ಯ, ಉಪಾಧ್ಯಕ್ಷರಾಗಿ ಮೋನಪ್ಪ ಕೆಬ್ಲಾಡಿ ಅವಿರೋಧ ಆಯ್ಕೆ

0

ಪಂಜ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಭಾಸ್ಕರ್ ನಾಯಕ್ ಬೇರ್ಯ,ಉಪಾಧ್ಯಕ್ಷರಾಗಿ ಮೋನಪ್ಪ ಕೆಬ್ಲಾಡಿ ಅವಿರೋಧ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಒಟ್ಟು 12 ಮಂದಿ ನಿರ್ದೇಶಕರ ಆಯ್ಕೆ ಕೂಡ ಮತದಾನ ನಡೆಯದೆ ಅವಿರೋಧ ನಡೆಯಿತು. ಸಭಾಧ್ಯಕ್ಷತೆಯನ್ನು ನಿಕಟಪೂರ್ವಾಧ್ಯಕ್ಷ ಚನಿಯಪ್ಪ ಕುಳ್ಳಕೋಡಿ ಸಭಾಧ್ಯಕ್ಷತೆ ವಹಿಸಿದ್ದರು. ರಿಟರ್ನಿಂಗ್ ಅಧಿಕಾರಿ ,ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ಎಂ ,ಆಡಳಿತ ನೂತನ ಆಡಳಿತ ಮಂಡಳಿ ನಿರ್ದೇಶಕರಾದ ಚನಿಯಪ್ಪ ಗೌಡ ಕುಳ್ಳಕೋಡಿ, ನಾರಾಯಣ ನಾಯ್ಕ ಚಾಳೆಗುಳಿ,ಉದಯ ಬಿಡಾರಕಟ್ಟೆ, ಗಣೇಶ್ ಪಾಲೋಳಿ , ಪೆರ್ಗಡೆ ಕಾಣಿಕೆ, ಮೋನಪ್ಪ ನೆಕ್ಕಿಲ, ಜಯಂತ ಕುಳ್ಳಕೋಡಿ , ಪದ್ಮಯ್ಯ ನಾಯ್ಕ ಸಂಪ, ಶ್ರೀಮತಿ ಲಕ್ಷ್ಮೀ ನೇರಳ, ಶ್ರೀಮತಿ ಯಶೋದ ಬರೆಮೇಲು ಹಾಗೂ ಪೂರ್ವಾಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ಶ ಸಿ , ಸಂಘದ ಸದಸ್ಯರು,ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹಾರ ಹಾಕಿ ಸ್ವಾಗತಿಸಿ
ಶುಭ ಹಾರೈಸಿದರು. ಪೂರ್ವಾಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ರವರು ಶುಭ ಹಾರೈಸಿದರು. ಆದರ್ಶ ಸಿ ಸ್ವಾಗತಿಸಿದರು ಮತ್ತು ವಂದಿಸಿದರು.