ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಬಗ್ಗೆ ಪೂರ್ವಭಾವಿ ಸಭೆ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವವು ಫೆ. 13 ರಿಂದ ಫೆ.17 ರವರೆಗೆ ನಡೆಯಲಿದ್ದು ಈ ಬಗ್ಗೆ ಭಕ್ತಾದಿಗಳ ಪೂರ್ವಭಾವಿ ಸಭೆಯು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತುರವರ ಅಧ್ಯಕ್ಷತೆಯಲ್ಲಿ ಜ.06 ರಂದು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಸುರೇಶ್ ಕುಮಾರ್ ಶೆಟ್ಟಿಯವರು ಜಾತ್ರೋತ್ಸವ ಯಶ್ಸಸ್ವಿಯಾಗಿ ನಡೆಯುವ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರ ಸಹಕಾರ ಕೋರಿದರು‌.
ಜಾತ್ರೋತ್ಸವದ ಆಮಂತ್ರಣ ಮುದ್ರಣ,ಮನೆ ಮನೆ ಗಳಿಗೆ ಆಮಂತ್ರಣ ತಲುಪಿಸುವ ಬಗ್ಗೆ,ಜಾತ್ರಾ ಸಂತೆ ,ಶುಚಿತ್ವ, ವಾಹನ ಪಾರ್ಕಿಂಗ್ ವ್ಯವಸ್ಥೆ,ಧಾರ್ಮಿಕ ಕಾರ್ಯಕ್ರಮಗಳು,ಭೋಜನದ ವ್ಯವಸ್ಥೆ,ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಚರ್ಚೆಗಳು ನಡೆಯಿತು.


ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಉದಯ ಕುಮಾರ್ ಕೆ.ಟಿ.ಅರ್ಚಕರು,ವಿಶ್ವನಾಥ ಭಟ್ ಕುರುಂಬುಡೇಲು,ಗಂಗಾಧರ ರೈ ಪುಡ್ಕಜೆ,ಉದಯಪ್ರಸಾದ್ ಅಜಪಿಲ,ರಾಧಾಕೃಷ್ಣ ಕುಲಾಲ್,ಚಂದ್ರಕಾಂತ,ಶಮಿತ ಪಿ.ರೈ, ನವಪ್ರಭಾ ತಂಬಿನಮಕ್ಕಿ,
ವ್ಯ.ಸ.ಮಾಜಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ,ಮೋನಪ್ಪ ಗೌಡ ತಂಬಿನಮಕ್ಕಿ,ತಿಮ್ಮಪ್ಪ ಫಾರೆಸ್ಟರ್, ನವೀನ ರೈ ತಂಬಿನಮಕ್ಕಿ, ಎ‌.ಕೆ.ಮಣಿಯಾಣಿ,ನಾಗೇಶ ಕುಲಾಲ್,ಜಯರಾಮ ಉಮಿಕ್ಕಳ, ಗುಣವತಿ ಮಂಡೆಪು, ಶಶಿಕಲಾ ಚಾವಡಿಬಾಗಿಲು,ಸ್ವಾತಿ ಭಟ್,ಭಾರತಿ ಕಲ್ಲೋಣಿ, ಪ್ರೇಮಚಂದ್ರ ಬೆಳ್ಳಾರೆ, ಮಹೇಶ್ ಕಲ್ಪಣೆ ಮತ್ತಿತರರು ಉಪಸ್ಥಿತರಿದ್ದರು.
ಉದಯಪ್ರಸಾದ್ ಅಜಪಿಲ ಸ್ವಾಗತಿಸಿ,ವಂದಿಸಿದರು.