ಜಟ್ಟಿಪಳ್ಳ : ಚೆನ್ನಕೇಶವ ದೇವರ ಪಟ್ಟಣ ಸವಾರಿ ಪೂರ್ವಭಾವಿಯಾಗಿ ರಸ್ತೆ ಸ್ವಚ್ಛತಾ ಕಾರ್ಯ

0

ಶ್ರೀ ಚೆನ್ನಕೇಶವ ದೇವರ ಜಾತ್ರಾ ಪ್ರಯುಕ್ತ ದೇವರ ಪಟ್ಟಣ ಸವಾರಿ ನಡೆಯಲಿದ್ದು ಜ.9 ರಂದು ರಾತ್ರಿ ಚೆನ್ನಕೇಶವ ದೇವರು ಜಟ್ಟಿಪಳ್ಳಕ್ಕೆ ಕಟ್ಟೆಪೂಜೆಗೆ ಆಗಮಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಜಟ್ಟಿಪಳ್ಳ ದೇವರ ಕಟ್ಟೆಯಿಂದ, ಸುಳ್ಯ ಮುಖ್ಯರಸ್ತೆಯಿಂದ ಜಟ್ಟಿಪಳ್ಳ ರಸ್ತೆ ತಿರುಗುವಲ್ಲಿ ವರೆಗೆ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಜಟ್ಟಿಪಳ್ಳದ ಶ್ರೀರಾಮ ಭಜನಾ ಸೇವಾ ಸಂಘ,
ಕಪಿಲ ಯುವಕ ಮಂಡಲ, ಮಾನಸ ಮಹಿಳಾ ಮಂಡಲ, ಮಾನಸ ಯುವತಿ ಮಂಡಲಗಳ ಪದಾಧಿಕಾರಿಗಳು, ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.
ನಗರ ಪಂಚಾಯತ್ ವತಿಯಿಂದ ಸ್ವಚ್ಛತೆಗೆ ವಾಹನ ನೀಡಿ ಸಹಕರಿಸಲಾಗಿತ್ತು. ಮಾಧವ ಕುದ್ಪಾಜೆಯವರು ಶ್ರಮದಾನಿಗಳಿಗೆ ಪಾನೀಯ ನೀಡಿ ಸಹಕರಿಸಿದರು.