ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ ಹಿನ್ನೆಲೆ ಸಿಡಿ ಮದ್ದು ಪ್ರದರ್ಶನಕ್ಕಾಗಿ ಪಾರ್ಕಿಂಗ್ ಸ್ಥಳ ಖಾಲಿ ಇರಿಸಲಾಗಿದೆ : ದೇವಸ್ಥಾನದಿಂದ ಸ್ಪಷ್ಟನೆ

0

ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ ಹಿನ್ನೆಲೆಯಲ್ಲಿ ಇಂದು ಸಿಡಿ ಮದ್ದು ಪ್ರದರ್ಶನವಿರುವುದರಿಂದ ಪಾರ್ಕಿಂಗ್ ಸ್ಥಳ ಖಾಲಿ ಇರಿಸಲಾಗಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದವರು ಸ್ಪಷ್ಟ ಪಡಿಸಿದ್ದಾರೆ. ಪಾರ್ಕಿಂಗ್ ಸ್ಥಳ ಖಾಲಿ ಇದ್ದು ರಸ್ತೆ ಬದಿ ವಾಹನ ಪಾರ್ಕಿಂಗ್ ಮಾಡಲಾಗಿದೆ ಎಂದು ವರದಿಯಾದ ಹಿನ್ನೆಲೆಯಲ್ಲಿ ದೇವಸ್ಥಾನದಿಂದ ಸ್ಪಷ್ಟನೆ ನೀಡಿರುತ್ತಾರೆ. ಸಿಡಿಮದ್ದು ಪ್ರದರ್ಶನ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.