ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಪ್ರಯುಕ್ತ

0

🔸 ಪಂಜ ದೇವಳದಲ್ಲಿ ವಿಶೇಷ ಪೂಜೆ -ಭಜನಾ ಸಂಕೀರ್ತನೆ , ಕರಸೇವಕರ ಮಾತು

ಅಯೋಧ್ಯ ಶ್ರೀ ರಾಮ ಮಂದಿರದಲ್ಲಿ
ಪ್ರಾಣ ಪ್ರತಿಷ್ಠೆ ಪ್ರಯುಕ್ತ ಐವತ್ತೊಕ್ಲು, ಕೂತ್ಕುಂಜ , ಪಂಬೆತ್ತಾಡಿ ಗ್ರಾಮದ ಹಿಂದೂ ಬಾಂಧವರಿಂದ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜ.22 ರಂದು ವಿಶೇಷ ಪೂಜೆ, ಮುಂಜಾನೆಯಿಂದ ದೇವಳದ ಪಾರ್ವತಿ ಸಭಾ ಭವನದಲ್ಲಿ ಭಜನಾ ಸಂಕೀರ್ತನೆ ನಡೆಯಿತು.

ಕರ ಸೇವಕರಾದನಿವೃತ್ತ ಶಿಕ್ಷಕ ಬಾಲಕೃಷ್ಣ ಗೌಡ ಹೇಮಳ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ, ಪ್ರಗತಿಪರ ಕೃಷಿಕರಾದ ಶಿವರಾಮಯ್ಯ ಕರ್ಮಜೆ,ವೆಂಕಟ್ರಮಣ ಭಟ್ ಹೊಸಗದ್ದೆ, ಜಾಕೆ ವೆಂಕಟ್ರಮಣ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು
ಕರ ಸೇವೆಯ ಅನುಭವ ಹಂಚಿಕೊಂಡರು. ಕಾರ್ಯಕ್ರಮದಲ್ಲಿ
ಸಂಧ್ಯಾ ಯಚ್ ಪ್ರಾರ್ಥಿಸಿದರು.


ಜಯರಾಮ ಕಲ್ಲಾಜೆ ನಿರೂಪಿಸಿದರು. ಉದಯಶಂಕರ್ ಭಟ್ ಅಡ್ಕ ವಂದಿಸಿದರು.

ಮಧ್ಯಾಹ್ನ ಶ್ರೀ ದೇವಳದಲ್ಲಿ ವಿಶೇಷ ಪೂಜೆ ನಡೆದು,ಪ್ರಸಾದ ವಿತರಣೆ, ರಾಮ ಭಕ್ತರಿಂದ ಅನ್ನಸಂತರ್ಪಣೆ ಜರುಗಿತು. ಸಭಾ ಭವನದಲ್ಲಿ ಶ್ರೀ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರ ವೀಕ್ಷಣೆಗೆ ಟಿ ವಿ ಅಳವಡಿಸಲಾಗಿತ್ತು.ಪಂಜದಲ್ಲಿ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.