ಎಣ್ಮೂರು : ಶ್ರೀನಾಗಬ್ರಹ್ಮ ಕೋಟಿ ಚೆನ್ನಯ್ಯ ನೇಮೋತ್ಸವ ಆಮಂತ್ರಣ ಬಿಡುಗಡೆ

0

ಎಣ್ಮೂರು ಶ್ರೀನಾಗಬ್ರಹ್ಮ ಆದಿಗರಡಿಯಲ್ಲಿ ಶ್ರೀ ಕೋಟಿ ಚೆನ್ನಯ್ಯ ನೇಮೋತ್ಸವ ಮಾರ್ಚಿಯಲ್ಲಿ ನಡೆಯಲ್ಲಿರುವುದು ಆ ಪ್ರಯುಕ್ತ ಎಣ್ಮೂರು ಗ್ರಾಮ ಜಾವಡಿ ಆರೆಂಬಿಯಲ್ಲಿ ಶಿರಾಡಿ ರಾಜನ್ ದೈವಸ್ಥಾನದಲ್ಲಿ ಜ.22ರಂದು ನೇಮೋತ್ಸವದ ಪರ್ವಕಾಲದಲ್ಲಿ ಗರಡಿಯ ಅನುವಂಶಿಕ ಆಡಳ್ತೆದಾರರಾದ ರಾಮಕೃಷ್ಣ ಶೆಟ್ಟಿ ಕಟ್ಟಬೀಡುರವರು ಪ್ರಾರ್ಥನೆಯ ಬಳಿಕ ಬಿಡುಗಡೆಗೊಳಿಸಿ ನೇಮೋತ್ಸವವು ಯಶಸ್ವಿಗಾಗಿ ಉಪಸ್ಥಿತರಿದ್ದ ಭಕ್ತಾದಿಗಳ ಮುಂದೆ ಮನವರಿಕೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕಟ್ಟ ಬೀಡು ಕುಟುಂಬಸ್ಥರು, ಅಲ್ಲದೆ ಶ್ರೀಮತಿ ಪದ್ಮಾ ಆರ್ ಶೆಟ್ಟಿ, ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಹಾಗೂ ಕೂಡು ಕಟ್ಟಿನ ಭಕ್ತಾದಿಗಳು ಉಪಸ್ಥಿತರಿದ್ದರು.