ಮುರುಳ್ಯ: ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಶ್ರೀರಾಮ ತಾರಕ ಮಂತ್ರ ಹೋಮ

0

ಮುರುಳ್ಯ ಗ್ರಾಮದ ಸಮಹಾದಿ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಜ.22ರಂದು ಅಯೋಧ್ಯೆ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ಸಲುವಾಗಿ ಶ್ರೀರಾಮ ತಾರಕ ಮಂತ್ರ ಹೋಮ ಕಾರ್ಯಕ್ರಮ ನಡೆಯಿತು. ಭಜನಾ ಮಂದಿರದ ಸಂಚಾಲಕ ವಸಂತ ನಡುಬೈಲುರವರ ಉಪಸ್ಥಿತಿಯಲ್ಲಿ ನಡೆಯಿತು. ಬೆಳಿಗ್ಗೆಯಿಂದ ಶ್ರೀರಾಮ ತಾರಕ ಮಂತ್ರ ಹೋಮ ಮತ್ತು ರಾಮನಾಮ ಮಂತ್ರ ಭಜನೆಯು ಮೂಲಕ ನಡೆಯಿತು. ವಿವಿಧ ಸಂಘ ಸಂಸ್ಥೆಗಳು ಭಾಗವಹಿಸಿದ್ದವು. ಭಜನಾ ಮಂದಿರದ ಖಜಾಂಜಿ ಮತ್ತು ಸುಳ್ಯ ಶಾಸಕಿ ಬಾಗಿರಥಿ ಮುರಳ್ಯ ಉಪಸ್ಥಿತರಿದ್ದರು.
ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಅರ್ಚಕ ಶ್ರೀ ಹರಿ ಕುಂಜೂರಾಯ ಮತ್ತು ವೇದಮೂರ್ತಿ ಪ್ರಶಾಂತ್ ಪಲ೯ತ್ತಾಯರ ನೇತೃತ್ವದಲ್ಲಿ ನಡೆಯಿತು.