ಪಂಜ ಪೇಟೆಯಲ್ಲಿ ದೇವಳದ ಕಾಣಿಕೆ ಹುಂಡಿ ಲೋಕಾರ್ಪಣೆ

0

ಪಂಜ ಪೇಟೆಯಲ್ಲಿ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ದ್ವಾರದಲ್ಲಿ ಕಾಣಿಕೆ ಹುಂಡಿ ಲೋಕಾರ್ಪಣೆ ಫೆ.1ರಂದು ನಡೆಯಿತು.

ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ರವರು ಕಾಣಿಕೆ ಹುಂಡಿಯನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ವೇಳೆ ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ವರ್ತಕರಾದ ರವಿ ನಾಗತೀರ್ಥ, ಮೇದಪ್ಪ ಗೌಡ,ಪಂಜ ಬಿ ಯಂ ಯಸ್ ಆಟೋ ರಿಕ್ಷಾ ಚಾಲಕರ ಸಂಘದ ಪೂರ್ವಾಧ್ಯಕ್ಷ ದೇವಪ್ಪ ಏನೆಕಲ್ಲು, ಸದಸ್ಯರು, ಊರವರು ಉಪಸ್ಥಿತರಿದ್ದರು.