ಮಾ. 30ರಿಂದ ಏ. 4: ಅರ್ಗುಡಿ ದೇವಸ್ಥಾನದಲ್ಲಿ ಅಷ್ಟ ಬಂಧ ಬ್ರಹ್ಮ ಕಲಶ, ಆಮಂತ್ರಣ ಪತ್ರ ಬಿಡುಗಡೆ, ಫೆ. 18 ಆಮಂತ್ರಣ ಪತ್ರ ಅಭಿಯಾನ

0

ಬಳ್ಪ ಗ್ರಾಮದ ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮ ಕಲಶ ಮಾ. 30ರಿಂದ‌ ಏ. 4ರ ತನಕ ನಡೆಯಲಿದ್ದು, ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಫೆ. 11ರಂದು ನಡೆಯಿತು. ತಿಮ್ಮಪ್ಪ ಗೌಡ ಬೊಳ್ಮಲೆ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಉಪ್ಪಳ ನಡುಮನೆಗುತ್ತು ಲಿಂಗಪ್ಪ ರೈ ಅರ್ಗುಡಿ, ಅಧ್ಯಕ್ಷ ಸದಾನಂದ ಕಾರ್ಜ, ಉಪಾಧ್ಯಕ್ಷರಾದ ವಿಶ್ವನಾಥ ರೈ ಅರ್ಗುಡಿ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಲೋಕೇಶ್ ಕಟ್ಟ, ಅಡ್ಯಾರ್ ಗುತ್ತು ಅರುಣ್ ರೈ ಗೆಜ್ಜೆ, ಚಂದ್ರಶೇಖರ ಗೌಡ ಕಟ್ಟ, ಬೆಳ್ಯಪ್ಪ ಗೌಡ, ಎಲ್ಯಣ್ಣ ಗೌಡ ಕಟ್ಟ, ಮೋಹನ್ ಗೌಡ ಅಗಳ್ತ, ಶ್ರೀಕೃಷ್ಣ ಭಟ್ ಪಟೋಳಿ ಮತ್ತು ಸಮಿತಿಗಳ ಸದಸ್ಯರು, ಅರ್ಚಕರಾದ ಸುರೇಶ್ ಅಮ್ಮಣ್ಣಾಯ ಸೇರಿದಂತೆ ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಫೆ. 18ರಂದು ಆಮಂತ್ರಣ ಪತ್ರ ಅಭಿಯಾನ ನಡೆಯಲಿದ್ದು, ಶ್ರೀಮತಿ ತುಳಸಿ ನಾಗೇಶ್ ಮತ್ತು ನಾಗೇಶ್ ಪಡಿಕ್ಕಿಲಾಯ ಅಭಿಯಾನ ಉದ್ಘಾಟಿಸಲಿದ್ದಾರೆ. ಆ ದಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಆಮಂತ್ರಣ ಹಂಚಿಕೆ ಕಾರ್ಯ ನಡೆಯಲಿದೆ ಎಂದು ಸದಾನಂದ ರೈ ಅರ್ಗುಡಿ ತಿಳಿಸಿದ್ದಾರೆ.