ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಸಂಪನ್ನ

0

ಇತಿಹಾಸ ಪ್ರಸಿದ್ಧ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಫೆ.13 ರಿಂದ ಪ್ರಾರಂಭಗೊಂಡು ಫೆ.17 ರವರೆಗೆ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು.

ಫೆ.17 ರಂದು ರಾತ್ರಿ ಅಗ್ನಿಗುಳಿಗ ದೈವದ ಭಂಡಾರ ತೆಗೆಯಲಾಯಿತು.ನಂತರ ಭೂತಕೋಲ ನಡೆದು ಬಳಿಕ ಬಟ್ಟಲುಕಾಣಿಕೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಸದಸ್ಯರಾದ ಅರ್ಚಕ ಉದಯಕುಮಾರ ಕೆ.ಟಿ, ವಿಶ್ವನಾಥ ಭಟ್ ಕುರುಂಬುಡೇಲು,ಗಂಗಾಧರ ರೈ ಪುಡ್ಕಜೆ,ಉದಯಪ್ರಸಾದ್ ಅಜಪಿಲ, ಶಮಿತಾ ಪಿ.ರೈ ಪನ್ನೆ, ನವಪ್ರಭಾ ತಂಬಿನಮಕ್ಕಿ, ರಾಧಾಕೃಷ್ಣ ಕುಲಾಲ್, ಚಂದ್ರಕಾಂತ ಗೌರಿಹೊಳೆ ಹಾಗೂ ಸಾವಿರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.

ಬೆಳಿಗ್ಗೆ ನಡೆದ ಶ್ರೀ ದೇವರ ಅವಭೃತ ಸ್ನಾನ,ದರ್ಶನ ಬಲಿ,ಬಟ್ಟಲುಕಾಣಿಕೆ ಮತ್ತು ರಾತ್ರಿ ನಡೆದ ಅಗ್ನಿಗುಳಿಗ ದೈವದ ಭೂತಕೋಲವನ್ನು ಸುದ್ದಿ ಚಾನೆಲ್ ಮೂಲಕ ನೇರ ಪ್ರಸಾರ ಮಾಡಲಾಗಿದ್ದು ದೇಶ,ವಿದೇಶದಲ್ಲಿರುವ ಸಾವಿರಾರು ಜನರು ವೀಕ್ಷಿಸಿದರು.