ಐವರ್ನಾಡು : ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ಪದಾಧಿಕಾರಿಗಳ ಆಯ್ಕೆ

0

ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ ಇದರ ವಾರ್ಷಿಕ ಮಹಾಸಭೆಯು ಜ.21 ರಂದು ಶಿವಪ್ರಸಾದ್ ದರ್ಖಾಸ್ತು ಇವರ ಅಧ್ಯಕ್ಷತೆಯಲ್ಲಿ ಮಂಜುಶ್ರೀ ಕಟ್ಟಡದಲ್ಲಿ ನಡೆಯಿತು.

2024-25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶಿವಪ್ರಸಾದ್ ಕಟ್ಟತ್ತಾರು, ಕಾರ್ಯದರ್ಶಿಯಾಗಿ ಜಯಪ್ರಸಾದ್ ಕಜೆತಡ್ಕ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ವಿಶ್ವನಾಥ್ ಕಟ್ಟತ್ತಾರು, ಉಪ ಕಾರ್ಯದರ್ಶಿಯಾಗಿ ಜಸ್ವಂತ್ ದರ್ಖಾಸ್ತು, ಕ್ರೀಡಾ ಕಾರ್ಯದರ್ಶಿಯಾಗಿ ಪ್ರಮೋದ್ ಕಣಿಲೆಗುಂಡಿ,ಗೌರವ ಅಧ್ಯಕ್ಷರಾಗಿ – ಶಿವಪ್ರಸಾದ್ ದರ್ಖಾಸ್ತು ಆಯ್ಕೆಯಾದರು.


ಕಾರ್ಯಕಾರಣಿ ಸದಸ್ಯರುಗಳಾಗಿ ಹರೀಶ್ ರಾವ್ ಉದ್ದಂಪಾಡಿ, ಧರ್ಮಪಾಲ ಉದ್ದಂಪಾಡಿ, ಸುಂದರಲಿಂಗಮ್ ಸಿ.ಕೂಪ್, ನವೀನ್ ಕಜೆತಡ್ಕ, ಯೋಗೀಶ್ ಕಲಗದ್ದೆ, ದಯಾನಂದ ಕಟ್ಟತ್ತಾರು, ನಾಗಪ್ಪ ಪಾಲೆಪ್ಪಡಿ, ಶಾಂತರಾಮ ಕಣಿಲೆಗುಂಡಿ, ಕುಮಾರ ಕಟ್ಟತ್ತಾರು, ನಾರಾಯಣ ಉದ್ದಂಪಾಡಿ, ನಟರಾಜ ಸಿ. ಕೂಪ್, ದಾಸಪ್ಪ ಉದ್ಧಂಪಾಡಿ, ಗಣೇಶನ್ ಸಿ. ಕೂಪ್, ತಂಗಮುತ್ತು ಸಿ. ಕೂಪ್, ಶರತ್ ಸಿ. ಕೂಪ್, ಸರ್ವಾನುಮತದಿಂದ ಆಯ್ಕೆಯಾದರು. ಸಭೆಯಲ್ಲಿ ಸಂಘದ ಎಲ್ಲಾ ಸದಸ್ಯರುಗಳು ಹಾಜರಿದ್ದರು.