ಮೈಸೂರು ಜಿಲ್ಲಾ ಕಾಂಗ್ರೆಸ್ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಡಾ.ಶ್ವೇತ ಮಡಪ್ಪಾಡಿ ನೇಮಕ

0

ಮೈಸೂರು ಜಿಲ್ಲಾ ಕಾಂಗ್ರೆಸ್ ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾಗಿ ಡಾ.ಶ್ವೇತ ಮಡಪ್ಪಾಡಿ ನೇಮಕಗೊಂಡಿದ್ದಾರೆ. ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆದೇಶದ ಮೇರೆಗೆ ಡಾ.ಶ್ವೇತಾ ಮಡಪ್ಪಾಡಿಯವರನ್ನು ನೇಮಿಸಲಾಗಿದೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೇಮಕಾತಿ ಆದೇಶ ಪತ್ರ ನೀಡಲಾಯಿತು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿದ್ದ ಡಾ.ಶ್ವೇತಾ, ಭರತನಾಟ್ಯದಲ್ಲಿ ಪದವೀಧರೆ. ಗಾಯಕಿಯಾಗಿರುವ ಇವರು ಮೈಸೂರು ದಸರಾ, ಲಕ್ಕುಂಡಿ ಉತ್ಸವಗಳಲ್ಲಿಯೂ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಇವರು ದೇವಚಳ್ಳ ಗ್ರಾಮದ ಕಂದ್ರಪ್ಪಾಡಿಯ ಮಡಪ್ಪಾಡಿ ಬಾಲಕೃಷ್ಣ ಗೌಡ – ದಮಯಂತಿ ದಂಪತಿಯ ಪುತ್ರಿ. ಮೈಸೂರಿನ ಪ್ರಸಾದ್ ಅವರನ್ನು ಮದುವೆಯಾಗಿ ಮೈಸೂರು ನಿವಾಸಿಯಾಗಿರುವ ಅವರು ಇಬ್ಬರು ಪುಟ್ಟ ಮಕ್ಕಳ ತಾಯಿ. ಮೈಸೂರಿನನಲ್ಲಿ ಬ್ರಾಹ್ಮಿನ್ ಕೆಫೆ ಎಂಬ ಹೋಟೆಲ್ ಉದ್ಯಮ ನಡೆಸುತ್ತಾ ಪ್ರಸಿದ್ಧರಾಗಿದ್ದಾರೆ.