ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಧ್ವನಿವರ್ಧಕ ಕೊಡುಗೆ

0

ಕೊಡಗು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಧ್ವನಿವರ್ಧಕವನ್ನು ಮಾ.9ರಂದು ಕೊಡುಗೆಯ ನೀಡಲಾಯಿತು.

ದೇವಸ್ಥಾನದ ಸಭಾಭವನಕ್ಕೆ ಶ್ರೀಮತಿ ಹೇಮಾವತಿ ಮತ್ತು ಪುರುಷೋತ್ತಮ ಬಾಳೆಹಿತ್ಲು ಹಾಗೂ ಮಕ್ಕಳು ಮೂವತ್ತೈದು ಸಾವಿರ ರೂ. ವೆಚ್ಚದ ಧ್ವನಿವರ್ಧಕ ಮತ್ತು ಧ್ವನಿಪೆಟ್ಟಿಗೆಯನ್ನು ಹಾಗೂ ಅದಕ್ಕೆ ಸಂಬಂಧಿಸಿದ ಪರಿಕರಗಳನ್ನು ಕೊಡುಗೆಯಾಗಿ ನೀಡಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಎಂ. ಬಿ. ಸದಾಶಿವ, ಅಧ್ಯಕ್ಷ ಜಯಕುಮಾರ್ ಚೆದ್ಕಾರ್ ಹಿರಿಯರಾದ ಗೋಪಾಲಕೃಷ್ಣ ಅಂಬೆಕಲ್ಲು, ಕೊ‌.ಸಂಪಾಜೆ ಗ್ರಾ.ಪಂ.ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ದೇವಾಲಯದ ಆಡಳಿತ ಮಂಡಳಿ ಹಾಗೂ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ದೇವಸ್ಥಾನದಲ್ಲಿ ಶ್ರೀಮತಿ ಹೇಮಾವತಿ ಅವರು ಆಡಳಿತ ಮಂಡಳಿಯ ಸದಸ್ಯರಾಗಿಯೂ ಪುರುಷೋತ್ತಮ ಅವರು ಜೀರ್ಣೋದ್ಧಾರದ ಸಂಚಾಲಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.