ಸುಬ್ರಹ್ಮಣ್ಯ: ಉಚಿತ ಹೋಮಿಯೋಪತಿ ಔಷಧ ವಿತರಣಾ ಕಾರ್ಯಕ್ರಮ

0

ಶ್ರೀ ಪಯಸ್ವಿನಿ ಸಾವಯವ ಕೃಷಿ ಪರಿವಾರ ಸುಳ್ಯ ಹಾಗೂ
ಸುಬ್ರಹ್ಮಣ್ಯ-ಐನೆಕಿದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸುಬ್ರಹ್ಮಣ್ಯ
ಇದರ ಸಹಯೋಗದಲ್ಲಿ
ಅಡಿಕೆ ಕೃಷಿಕರಿಗೆ ಉಚಿತ ಹೋಮಿಯೋಪತಿ ಔಷಧ ವಿತರಣಾ ಕಾರ್ಯಕ್ರಮ ಮಾ.11 ರಂದು ನಡೆಯಿತು.


ಸುಬ್ರಹ್ಮಣ್ಯ ಐನೆಕಿದು ಪ್ರಾ. ಕೃ.ಪ. ಸ. ಸಂಘದ ಅಧ್ಯಕ್ಷ ಜಯಪ್ರಕಾಶ್ ಕೂಜುಗೋಡು ಅಧ್ಯಕ್ಷತೆ ವಗಿಸಿ ಎಲೆ ಚುಕ್ಕಿ ರೋಗದ ಮದ್ದಿನ ಬಗ್ಗೆ ಮಾಹಿತಿ ನೀಡಿದರು. ಶಿವರಾಮ ರೈ ಅವರು ಕೃಷಿ ಮಾಹಿತಿ ನೀಡಿದರು. ಅತಿಥಿಯಾಗಿ ಪರಮೇಶ್ವರ ಮರೋಳಿತ್ತಾಯ, ನಿವೃತ್ತ ಪ್ರಾಂಶುಪಾಲ ಪ್ರಭಾಕರ ಕಿರಿಭಾಗ, ನಿರ್ದೇಶಕ ಸೋಮ ಸುಂದರ ಕೂಜುಗೋಡು, ಜಯಪ್ರಕಾಶ ಕೂಜುಗೋಡು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಕೆ.ಎಸ್ ಧನ್ಯವಾದ ಮಾಡಿದರು.