ಜಾಲ್ಸೂರು: ಬಿ.ಎಂ.ಎಸ್. ಅಟೋರಿಕ್ಷಾ ಚಾಲಕರ ಸಂಘದ ವಾರ್ಷಿಕ ಮಹಾಸಭೆ

0

ಅಧ್ಯಕ್ಷರಾಗಿ ಗೋಪಾಲ ಪದವು ಪುನರಾಯ್ಕೆ

ಸುಳ್ಯ ತಾಲೂಕು ಬಿ.ಎಂ.ಎಸ್. ಅಟೋರಿಕ್ಷಾ ಚಾಲಕರ ಸಂಘದ ವಾರ್ಷಿಕ ಮಹಾಸಭೆಯು ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು.

ಜಾಲ್ಸೂರು ಘಟಕದ ಅಧ್ಯಕ್ಷ ಗೋಪಾಲ ಪದವು ಅವರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ಘಟಕದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಕಾರ್ಯದರ್ಶಿ ಚಂದ್ರಶೇಖರ ಮರ್ಕಂಜ, ಖಜಾಂಜಿ ನಿತ್ಯಾನಂದ ಅರಂಬೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಗೋಪಾಲ ಪದವು, ಉಪಾಧ್ಯಕ್ಷರಾಗಿ ಕರುಣಾಕರ ಕಾಡುಸೊರಂಜ, ಕಾರ್ಯದರ್ಶಿಯಾಗಿ ತಿಲಕ ಬೆಳ್ಳಿಪ್ಪಾಡಿ ಅವರು ಪುನರಾಯ್ಕೆಗೊಂಡರೆ, ನೂತನ ಕೋಶಾಧಿಕಾರಿಯಾಗಿ ಯಶವಂತ ಮುರೂರು ಆಯ್ಕೆಯಾದರು.


ನಿರ್ದೇಶಕರುಗಳಾಗಿ ಸತೀಶ್ ಆಚಾರ್ಯ ಜಾಲ್ಸೂರು, ಮಂಜುನಾಥ ಅಡ್ಕಾರುಪದವು, ಲೋಕೇಶ್ ಬೆಳ್ಳಿಪ್ಪಾಡಿ, ಮೋಹನ ಬೆಳ್ಳಿಪ್ಪಾಡಿ, ಇಬ್ರಾಹಿಂ ಮರಸಂಕ, ರೆದೀಶ್ ಬೇರ್ಪಡ್ಕ ಆಯ್ಕೆಯಾಗಿದ್ದು, ಒಟ್ಟು ಅವವತ್ತು ಮಂದಿ ಸದಸ್ಯರುಗಳಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಜಾಲ್ಸೂರು ಘಟಕದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.