ಮುಡ್ನೂರು ಮರ್ಕಂಜ ಶಾಲೆಯ ಭೋಜನಾಲಯದ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಅನುದಾನದ ಮಂಜೂರಾತಿ ಪತ್ರ ಹಸ್ತಾಂತರ

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡ್ನೂರು ಮರ್ಕಂಜದಲ್ಲಿ ನಿರ್ಮಾಣಗೊಂಡ ಶ್ರೀ ಅನ್ನಪೂರ್ಣೇಶ್ವರಿ ಭೋಜನಾಲಯದ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಅನುದಾನ ರೂಪಾಯಿ 1,00,000 ದ ಮಂಜೂರಾತಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ತಾಲೂಕಿನ ಯೋಜನಾಧಿಕಾರಿ ನಾಗೇಶ್.ಪಿ ರವರು ದಿನಾಂಕ ಎ.1ರಂದು ಶಾಲೆಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಪಂಚಸ್ಥಾಪನೆಯ ಮಾಜಿ ಆಡಳಿತ ಮೊಕ್ತೆಸರರಾದ ಯುವರಾಜ್ ಜೈನ್, ತಾಲೂಕಿನ ಜನಜಾಗೃತಿ ವೇದಿಕೆಯ ಪದ್ಮನಾಭ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಬೊಮ್ಮೆಟ್ಟಿ, ಶಾಲಾ ಮುಖ್ಯಗುರುಗಳಾದ ದೇವರಾಜ್, ಆದಿನಾಥೇಶ್ವರ ಸ್ವಾಮಿ ಬಸದಿಯ ಮುಖ್ಯಸ್ಥರುಗಳಾದ ನಾಗಕುಮಾರ ಶೆಟ್ಟಿ, ವಿದ್ಯಾಧರ, ಕೃಷ್ಣರಾಜಶೆಟ್ಟಿ, ಮರ್ಕಂಜ ಒಕ್ಕೂಟದ ಅಧ್ಯಕ್ಷರಾದ ಗೋಪಾಲಕೃಷ್ಣ ಬಲ್ಕಾಡಿ, ನಿಕಟಪೂರ್ವ ಅಧ್ಯಕ್ಷರಾದ ನಯನ ಕುಮಾರ್ ಜೈನ್, ಸೇವಾ ಪ್ರತಿನಿಧಿಗಳಾದ ನಿತ್ಯಾನಂದ ಭೀಮಗುಳಿ, ರೋಹಿಣಿ, ಶಾಲಾಭಿವೃದ್ಧಿ ಸಮಿತಿಯವರು, ಭೋಜನಾಲಯ ಕಟ್ಟಡ ಸಮಿತಿಯವರು, ಶಾಲಾ ಶಿಕ್ಷಕಿಯರು, ಹಿರಿಯ ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿಗಳು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಅಶ್ವಿನಿ ಸ್ವಾಗತಿಸಿದರು. ಮಿತ್ತಡ್ಕ ಸೇವಾ ಪ್ರತಿನಿಧಿ ನಿತ್ಯಾನಂದ ಭೀಮಗುಳಿ ವಂದಿಸಿದರು.