ಜಯಪ್ರಸಾದ್ ಜೋಶಿ ಸೇರಿದಂತೆ ಇನ್ನೂ ನಾಲ್ವರಿಗೆ ಕೋವಿ ಡೆಪೋಸಿಟ್ ನಿಂದ ವಿನಾಯಿತಿ

0

ಚುನಾವಣೆ ಸಂದರ್ಭದಲ್ಲಿ ಕೋವಿಗಳನ್ನು ಡೆಪಾಸಿಟ್ ಮಾಡುವುದಕ್ಕೆ ಪುರುಷೋತ್ತಮ ಮಲ್ಕಜೆಯವರಿಗೆ ಹೈಕೋರ್ಟ್ ವಿನಾಯಿತಿ ನೀಡಿ ಆದೇಶ ಮಾಡಿರುವುದರ ಜತೆಗೆ ಬೆಳ್ಳಾರೆಯ ಉದ್ಯಮಿ ಜಯಪ್ರಸಾದ್ ಜೋಶಿ ಸೇರಿದಂತೆ ಇನ್ನೂ ನಾಲ್ವರಿಗೆ ಇದೇ ರೀತಿಯ ವಿನಾಯಿತಿ ಆದೇಶ ಮಾಡಿರುವುದಾಗಿ ತಿಳಿದು ಬಂದಿದೆ.

ಪುರುಷೋತ್ತಮ ಮಲ್ಕಜೆ, ಜಯಪ್ರಸಾದ್ ಜೋಶಿ, ಗೋವಿಂದ ಭಟ್ ಮಾಣಿಮೂಲೆ, ಸುದರ್ಶನ ಕುಮಾರ್ ಬಂಟ್ವಾಳ ಮತ್ತು ಗಿರಿಜಾ ಶಂಕರ್ ಬಂಟ್ವಾಳ ಈ ಐವರು ಕೋವಿ ಡೆಪಾಸಿಟ್ ಆದೇಶದ ವಿರುದ್ಧ ಹೈಕೋರ್ಟ್ ನ ಮೆಟ್ಟಿಲೇರಿದ್ದರು.

ಈ ಐವರಿಗೂ ಠೇವಣೆಯಿಂದ ವಿನಾಯಿತಿ ನೀಡಿ ತೀರ್ಪು ನೀಡಿರುವ ನ್ಯಾಯಾಲಯವು ಠೇವಣಾತಿ ಪಡೆಯಲಾಗಿರುವ ಅವರ ಕೋವಿಗಳನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಪೊಲೀಸ್ ಇಲಾಖೆಗೆ ಆದೇಶಿಸಿದೆ.