ಗುತ್ತಿಗಾರಿನಲ್ಲಿ ಜನೌಷಧಿ ಕೇಂದ್ರ ಶುಭಾರಂಭ

0

ಗುತ್ತಿಗಾರಿನ ಸ್ವಾತಿ ಸಂಕೀರ್ಣದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಎ..3 ರಂದು ಉದ್ಘಾಟನೆ ಗೊಂಡಿತು.

ತಾಲೂಕು ಆರೋಗ್ಯಾಧಿಕಾರಿ ಡಾ. ನಂದಕುಮಾರ್ ದೀಪ ಬೆಳಗಿಸಿದರು. ಕಟ್ಟಡ ಮಾಲಕ ಎಂ.ಸುಬ್ರಹ್ಮಣ್ಯ ಭಟ್, ಕೃಷಿಕರಾದ ತಿರುಮಲೇಶ್ವರ ಭಟ್, ಡಾ.ಡಿ.ಎ ಕಾಮತ್, ಗುತ್ತಿಗಾರು ವರ್ತಕರ ಸಂಘದ ಅಧ್ಯಕ್ಷ ಶಿವರಾಮ ಕರುವಜೆ, ಬಿ.ಕೆ ಶ್ರೀ ಕೃಷ್ಣ ಭಟ್ ಗುಂಡಿಮಜಲು, ಪ್ರಕಾಶ್ ಭಟ್, ಪರಮೇಶ್ವರ ಭಟ್ , ಬಾಲ ಸುಬ್ರಹ್ಮಣ್ಯ ಭಟ್, ಸೀತಾಲಕ್ಷ್ಮೀ, ಶಿವರಂಜನ್ ಮತ್ತಿತರರು ಉಪಸ್ಥಿತರಿದ್ದರು.

ನಮ್ಮಲ್ಲಿ ಸಮಂಜಸ ದರದಲ್ಲಿ ಜೌಷದಿಗಳು ಲಭ್ಯ ಇರಲಿದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ಮಾಲಕರು ವಿನಂತಿಸಿದ್ದಾರೆ.