ತಳೂರು: ಸ್ನೇಹ ಯುವ ಬಳಗ ಮತ್ತು ಸೌರಭ ಯುವತಿ ಮಂಡಲಗಳ ನೂತನ ಪದಾಧಿಕಾರಿಗಳ ಆಯ್ಕೆ

0

ದೇವಚಳ್ಳ ಗ್ರಾಮದ ಸ್ನೇಹ ಯುವ ಬಳಗ ಹಾಗೂ ಸೌರಭ ಯುವತಿ ಮಂಡಲ ತಳೂರು ಮೆತ್ತಡ್ಕ ಇದರ ವತಿಯಿಂದ ಮಾ.31ರಂದು ತಳೂರು ಜಾತ್ರೋತ್ಸವದ ಅಂಗವಾಗಿ ವಾರ್ಷಿಕ ಕ್ರೀಡಾಕೂಟ ನಡೆಯಿತು.

ಕಾರ್ಯಕ್ರಮ ವನ್ನು ಯುವಕ ಮಂಡಲದ ಅಧ್ಯಕ್ಷ ಸುಜಿತ್ ಟಿ. ಪಿ. ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ವಿವಿಧ ಮನೋರಂಜನಾ ಕ್ರೀಡೆ, ಹಾಗೂ ಪಂದ್ಯಾವಳಿ ನಡೆಯಿತು. ಇದೆ ಸಮಯದಲ್ಲಿ 2024- 25ನೇ ಸಾಲಿಗೆ ಸ್ನೇಹ ಯುವ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.


ನೂತನ ಅಧ್ಯಕ್ಷರಾಗಿ ಹರೀಶ ಪಟ್ಟೆ, ಕಾರ್ಯದರ್ಶಿಯಾಗಿ ಕಾರ್ತಿಕ್.ಟಿ.ಪಿ ರವರು ಆಯ್ಕೆಯಾದರು.

ಹಾಗೂ ಇದೇ ಸಂದರ್ಭದಲ್ಲಿ ಸೌರಭ ಯುವತಿ ಮಂಡಲ ತಳೂರು ಮೆತ್ತಡ್ಕ ಇದರ ನೂತನ ಅಧ್ಯಕ್ಷರಾಗಿ ಶ್ರೀಮತಿ ಯಶೋಧ ಕುಸುಮಾಧರ ಪಟ್ಟೆ ಹಾಗೂ ಕಾರ್ಯದರ್ಶಿಯಾಗಿ ಶ್ರೀಮತಿ ಗೀತಾ ಶಶಿಧರ ಮೆತ್ತಡ್ಕ ಇವರನ್ನು ಆಯ್ಕೆ ಮಾಡಲಾಯಿತು.ನಂತರ ಬಹುಮಾನ ವಿತರಣೆ ಮಾಡಲಾಯಿತು. ಜಯಂತ ತಳೂರು ಕಾರ್ಯಕ್ರಮ ನಿರೂಪಿಸಿದರು. ಜೀವನ್ ತಳೂರು ಸ್ವಾಗತಿಸಿದರು. ಹಾಗೂ ಗಿರೀಶ ಟಿ ಪಿ ವಂದನಾರ್ಪಣೆಗೈದರು.