ಕಲ್ಲುಗುಂಡಿ : ಎಸ್ಸೆಸ್ಸೆಫ್, ಎಸ್. ವೈ. ಎಸ್, ಮುಸ್ಲಿಂ ಜಮಾಅತ್ ವತಿಯಿಂದ ಉಚಿತ ಸಾಮೂಹಿಕ ಸುನ್ನತ್ ಕರ್ಮ

0

ಸಯ್ಯದ್ ಕಿಲ್ಲೂರು ತಂಙಳ್ ದುಆ ರಿಂದ ಉದ್ಘಾಟನೆ

ಎಸ್ಸೆಸ್ಸೆಫ್ ಎಸ್. ವೈ. ಎಸ್, ಮುಸ್ಲಿಂ ಜಮಾಅತ್ ಕಲ್ಲುಗುಂಡಿ ಶಾಖೆ ವತಿಯಿಂದ ಎರಡನೇ ವರ್ಷದ ಉಚಿತ ಸಾಮೂಹಿಕ ಸುನ್ನತ್ ಕರ್ಮ ದಿನಾಂಕ 28.04.2024 ರಂದು ಕಲ್ಲುಗುಂಡಿ ಸುನ್ನೀ ಸೆಂಟರ್ ನಲ್ಲಿ ನಡೆಯಿತು.

ಈ ವೇಳೆ . ಎಸ್ಸೆಸ್ಸೆಫ್ಎಸ್ ಎಸ್. ವೈ. ಎಸ್. ಅಧ್ಯಕ್ಷರಾದ ಲತೀಫ್ ಉಸ್ತಾದ್ ಕೊಯನಾಡು ಅಧ್ಯಕ್ಷತೆಯಲ್ಲಿ, ಸಯ್ಯದ್ ಕಿಲ್ಲೂರು ತಂಙಳ್ ದುಆ ನೆರವೇರಿಸಿ, ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ಮುಸ್ಲಿಂ ಜಮಾಅತ್ ದ. ಕ. ಜಿಲ್ಲೆ ಉಪಾಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ, ಗ್ಯಾರಂಟಿ ಅನುಷ್ಠಾನ ಯೋಜನೆಯ ಸುಳ್ಯ ತಾಲ್ಲೂಕು ಅಧ್ಯಕ್ಷರಾದ ಹಮೀದ್ ಕುತ್ತಮೊಟ್ಟೆ, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಎಸ್ ಕೆ ಹನೀಫ್, ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್, ಗೂನಡ್ಕ ಖತೀಬರಾದ ಸಿದ್ದೀಕ್ ಸಖಾಫಿ, ಕೊಯನಾಡು ಸದರ್ ಉಸ್ತಾದರಾದ ನೌಶಾದ್ ಫಾಳಿಲಿ, ಎಂ ಜೆ ಎಂ ಕಲ್ಲುಗುಂಡಿ ಮಾಜಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ ಸಂಟ್ಯಾರ್, ಉಪಾಧ್ಯಕ್ಷರಾದ ತಾಜ್ ಮುಹಮ್ಮದ್, ಕೊಯನಾಡು ಮಸೀದಿ ಅಧ್ಯಕ್ಷರಾದ ರಝಾಕ್, ನುಸ್ರತುಲ್ ಇಸ್ಲಾಂ ಕೊಯನಾಡು ಅಧ್ಯಕ್ಷರಾದ ನಝೀರ್, ರಾಜಕೀಯ ಮುಖಂಡರಾದ ಹನೀಫ್ ಎಸ್ ಪಿ, ಎಸ್ಸೆಸ್ಸೆಫ್ ಕಲ್ಲುಗುಂಡಿ ಶಾಖಾಧ್ಯಕ್ಷರಾದ ಆಶಿಕ್ ಕೆ ಹೆಚ್ ಉಪಸ್ಥಿತರಿದ್ದರು. ಸೈದಲವಿ ಕೊಯನಾಡು ಸ್ವಾಗತಿಸಿ, ಸ್ವಾದಿಕ್ ಕಾರ್ಯಕ್ರಮ ನಿರೂಪಿಸಿ, ಫೈಝಲ್ ಝುಹ್ರಿ ವಂದಿಸಿದರು.