ಕೊಡಗು ಸಂಪಾಜೆ ಬಿದ್ದು ಸಿಕ್ಕಿದ ಮೊಬೈಲನ್ನು ಕಳೆದುಕೊಂಡ ವ್ಯಕ್ತಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಯುವಕ

0

ಯುವಕನೋರ್ವ ಬಿದ್ದು ಸಿಕ್ಕಿದ ಮೊಬೈಲನ್ನು ಕಳೆದುಕೊಂಡ ವ್ಯಕ್ತಿಗೆ ಹಿಂತಿರುಗಿಸಿಕೊಟ್ಟು ಪ್ರಾಮಾಣಿಕತೆ ಮೆರೆದ ಘಟನೆ ಕೊಡಗು ಸಂಪಾಜೆಯಲ್ಲಿ ಮೇ.19ರಂದು ಬೆಳಿಗ್ಗೆ ಸಂಭವಿಸಿದೆ.

ಕೊಡಗು ಸಂಪಾಜೆ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಶಿವರಾಜು ಎಂಬವರು ಮೇ.18ರಂದು ರಾತ್ರಿ ಬೈಕಿನಲ್ಲಿ ಮಡಿಕೇರಿ ಕಡೆಗೆ ತೆರಳುತ್ತಿದ್ದ ವೇಳೆ ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬಳಿ ಮೊಬೈಲ್ ರಸ್ತೆಯಲ್ಲಿ ಬಿದ್ದಿತೆನ್ನಲಾಗಿದೆ. ಆದರೆ ಈ ವಿಷಯ ಅವರಿಗೆ ತಿಳಿದಿರಲಿಲ್ಲ.‌ ಮೇ.19ರಂದು ಬೆಳಿಗ್ಗೆ ಈ ರಸ್ತೆಯಲ್ಲಿ ಬಂದ ಜಗನ್ ಡೆಮ್ಮಲೆ ಎಂಬವರಿಗೆ ರಸ್ತೆಯಲ್ಲಿ ಮೊಬೈಲ್ ಬಿದ್ದು ಸಿಕ್ಕಿದ್ದು, ಅವರು ಆ ಮೊಬೈಲನ್ನು ತನ್ನ ಸಹೋದರ ರಿತಿನ್ ಎಂಬವರಿಗೆ ನೀಡಿದ್ದರು.

ಈ ವೇಳೆ ಮೊಬೈಲ್ ಕಳೆದುಕೊಂಡ ಪೊಲೀಸ್ ಕಾನ್ಸ್ ಟೇಬಲ್ ಶಿವರಾಜು ಅವರು ಬೇರೆ ಮೊಬೈಲಿನಿಂದ ತಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಜಗನ್ ಅವರು ಕರೆ ಸ್ವೀಕರಿಸಿ, ಮೊಬೈಲ್ ಬಿದ್ದು, ಸಿಕ್ಕಿದ ವಿಷಯ ತಿಳಿಸಿ, ಬಳಿಕ ಶಿವರಾಜು ಅವರಿಗೆ ಹಿಂತಿರುಗಿಸಿಕೊಟ್ಟು ಪ್ರಾಮಾಣಿಕತೆ ಮೆರೆದರೆಂದು ತಿಳಿದುಬಂದಿದೆ.