ಕಳಂಜ ಯುವಕ ಮಂಡಲದಲ್ಲಿ ದಿl ಭಾಸ್ಕರ ಶ್ರೇಣಿ ಅವರಿಗೆ ಶ್ರದ್ಧಾಂಜಲಿ ಸಭೆ

0

ಯುವಕ ಮಂಡಲ ಕಳಂಜ ಇದರ ಮಾಜಿ ಕಾರ್ಯದರ್ಶಿ ನಿಧನರಾದ ಹಿನ್ನೆಲೆಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಮೇ.19 ರಂದು ನಡೆಸಲಾಯಿತು.

ಸಭೆಯನ್ನು ಉದ್ದೇಶಿಸಿ ಸ್ಥಳೀಯರಾದ ಶಂಭಯ್ಯ ಭಟ್ ಮುಂಡುಗಾರು, ಯುವಕ ಮಂಡಲದ ಗೌರವಾಧ್ಯಕ್ಷ ರಾಮಯ್ಯ ರೈ ಕಜೆಮೂಲೆ, ಅಧ್ಯಕ್ಷ ಶಿವರಾಮ ಕಜೆಮೂಲೆ, ಕಾರ್ಯದರ್ಶಿ ರಮೇಶ್ ಕೋಡಿಯಡ್ಕ, ಸದಸ್ಯರುಗಳಾದ ಈಶ್ವರ್ ವಾರಣಾಶಿ, ಲಕ್ಷ್ಮೀಶ ಕಜೆಮೂಲೆ, ಗಿರಿಧರ ಕಳಂಜ ಹಾಗೂ ಭಜನಾ ತಂಡದ ಸಹ ಸಂಚಾಲಕಿ ಮಧುರಾ ಗಂಗಾಧರ ತೋಟದಮೂಲೆ ಮೃತರ ಬಗ್ಗೆ ನುಡಿನಮನ ಸಲ್ಲಿಸಿದರು. ಒಂದು ನಿಮಿಷಗಳ ಮೌನ ಪ್ರಾರ್ಥನೆ ಬಳಿಕ, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.