ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ಸಂಭ್ರಮದ ಬೆಳ್ಳಿ ಹಬ್ಬ ಆಚರಣೆ

0

ವಿವಿಧ ಕ್ಷೇತ್ರದ ಸಾಧಕರಿಗೆ ಹಾಗೂ ಪೂರ್ವಾಧ್ಯಕ್ಷರಿಗೆ ಸನ್ಮಾನ

ದ.ಕ. ಜಿಲ್ಲಾ ಗ್ಯಾರೇಜ್ ಮ್ಹಾಲಕರ ಸಂಘ ಮಂಗಳೂರು ದ. ಕ. ಮತ್ತು ಉಡುಪಿ ಜಿಲ್ಲೆ ಇದರ ಆಶ್ರಯದೊಂದಿಗೆ ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದಬೆಳ್ಳಿಹಬ್ಬ ಆಚರಣೆ ಹಾಗೂ 25ನೇ ವಾರ್ಷಿಕ ಮಹಾಸಭೆ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಮೇ.26 ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ಜರುಗಿತು.

ಸಮಾರಂಭದ ಉದ್ಘಾಟನಾ ಸಮಾರಂಭ ವು ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪದ್ಮಶ್ರೀ ಪುರಸ್ಕೃತ ತೂಗುಸೇತುವೆ ಸರದಾರರಾದ ಗಿರೀಶ್ ಭಾರದ್ವಾಜ್ ದೀಪ ಪ್ರಜ್ವಲಿಸಿದರು.

ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು| ಭಾಗೀರಥಿ ಮುರುಳ್ಯ, ದ.ಕ ಗ್ಯಾರೇಜ್ ಮ್ಹಾಲಕರ ಸಂಘ ಮಂಗಳೂರು, ದ.ಕ. ಮತ್ತು ಉಡುಪಿ ಜಿಲ್ಲೆಯ ಚೇರ್ ಮೆನ್ ಎಂ.ದಿವಾಕರ, ದ. ಕ. ಗ್ಯಾರೇಜ್ ಮಾಲಕರ ಸಂಘ ದ.ಕ ಮತ್ತು ಉಡುಪಿ ಜಿಲ್ಲೆಯ ಪ್ರ.ಕಾರ್ಯದರ್ಶಿ ಪುರುಷೋತ್ತಮ ಕೆ‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಹಾಗೂ ಸಂಘದ ಮಾಜಿ ಅಧ್ಯಕ್ಷ ರುಗಳಾದ ತಾಲೂಕು ಆರೋಗ್ಯಾಧಿಕಾರಿ ಡಾ.ನಂದಕುಮಾರ್ ಸುಳ್ಯ, ಎಂ. ಬಿ. ಸದಾಶಿವ ಅಧ್ಯಕ್ಷರು ಎಂ. ಬಿ. ಪ್ರತಿಷ್ಠಾನ ಸುಳ್ಯ, ಬಾಲಕೃಷ್ಣ ಭಟ್ ಕೊಡೆಂಕೇರಿ ನಿವೃತ್ತ ಪ್ರಾಂಶುಪಾಲರು, ಅಧ್ಯಕ್ಷರು ದೃಷ್ಟಿ ಚಾರಿಟೇಬಲ್ ಸೊಸೈಟಿ, ಎ. ಜನಾರ್ಧನ ಅಧ್ಯಕ್ಷರು ದ.ಕ. ಗ್ಯಾರೇಜ್ ಮ್ಹಾಲಕರ ಸೌಹಾರ್ದ ಸಹಕಾರಿ ಸಂಘ ನಿ., ಮಂಗಳೂರು ಯಂ, ರುಕ್ಕಯ್ಯ ಮಾಜಿ ಚೇರ್ಮೆನ್, ದ.ಕ. ಗ್ಯಾರೇಜ್ ಮ್ಹಾಲಕರ ಸಂಘ ಮಂಗಳೂರು ದ.ಕ. ಮತ್ತು ಉಡುಪಿ ಜಿಲ್ಲೆ,ಪುಂಡಲೀಕ ಸುವರ್ಣ ಮಾಜಿ ಚೇರ್‌ಮೆನ್ ದ.ಕ. ಗ್ಯಾರೇಜ್ ಮಾಲಕರ ಸಂಘ ದ.ಕ ಮತ್ತು ಉಡುಪಿ ಜಿಲ್ಲೆ, ದಿನೇಶ್ ಕುಮಾರ್ ಮಾಜಿ ಅಧ್ಯಕ್ಷರು ದ.ಕ. ಗ್ಯಾರೇಜ್ ಮಾಲಕರ ಸಂಘ ಮಂಗಳೂರು

ದ.ಕ. ಮತ್ತು ಉಡುಪಿ ಜಿಲ್ಲೆ,ರಾಧಾಕೃಷ್ಣ ಪಕಳ ಮಾಜಿ ಅಧ್ಯಕ್ಷರು ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂ ಸುಳ್ಯ , ಎಂ. ಹರೀಶ್ಚಂದ್ರ ಮಾಜಿ ಅಧ್ಯಕ್ಷರು ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘ ಸುಳ್ಯ, ಜನಾರ್ಧನ ದೋಳ ಮಾಜಿ ಅಧ್ಯಕ್ಷರು ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘ ಸುಳ್ಯ, ಎಸ್. ಗೋಪಾಲ ನಡುಬೈಲು ಮಾಜಿ ಅಧ್ಯಕ್ಷರು ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘ ಸುಳ್ಯ, ಡಿ. ಎನ್. ವೆಂಕಟ್ರಮಣ ಮಾಜಿ ಅಧ್ಯಕ್ಷರು ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘ ಸುಳ್ಯ, ಐ. ವೆಂಕಟ್ರಮಣ ಮಾಜಿ ಅಧ್ಯಕ್ಷರು ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘ ಸುಳ್ಯ , ಡಿ. ಸಾಂತಪ್ಪ ಮಾಜಿ ಅಧ್ಯಕ್ಷರು ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘ ಸುಳ್ಯ,ಹಿರಿಯ ಸದಸ್ಯ ಸದಾಶಿವ ರೈ , ನಿವೃತ್ತ ಡಿ.ಸಿ.ಸಿ.ಬ್ಯಾಂಕ್ ಉದ್ಯೋಗಿ ವಿಶ್ವನಾಥ ನಾಯರ್,ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್,ಹಿರಿಯ ಗ್ಯಾರೇಜ್ ಉದ್ಯಮಿ
ಇಬ್ರಾಹಿಂ, ಗ್ರಾಮ ಲೆಕ್ಕಾಧಿಕಾರಿ ತಿಪ್ಪೇಶ್, ಸಂಘಟಕ ಬೂಡು ರಾಧಾಕೃಷ್ಣ ರೈ ಇವರುಗಳನ್ನು ಸಂಘದ ವತಿಯಿಂದ ಶಾಲು ಹಾರ ಫಲಪುಷ್ಪ ಪೇಟ ತೊಡಿಸಿ‌ ಗೌರವಿಸಲಾಯಿತು.

ಆರಂಭದಲ್ಲಿ ಅಗಲಿದ ಸಂಘದ ಸದಸ್ಯರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕು.ಪಲ್ಲವಿ ಆಲೆಟ್ಟಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಎಂ.ಮಲ್ಲೇಶ್ ಬೆಟ್ಟಂಪಾಡಿ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜನಾರ್ದನ ದೋಳ ವರದಿ ವಾಚಿಸಿದರು.
ನಗರ ಪಂಚಾಯತ್ ಮಾಜಿ ಸದಸ್ಯ ಬೂಡು ರಾಧಾಕೃಷ್ಣ ರೈ ಕಾರ್ಯಕ್ರಮ ನಿರೂಪಿಸಿದರು.

ಪದಾಧಿಕಾರಿಗಳಾದ ಮನೋಹರ ಬೊಳ್ಳೂರು, ಗೋಪಾಲ ನಡುಬೈಲು, ಜನಾರ್ಧನ ದೋಳ, ಸತ್ಯನಾರಾಯಣ ಪೈಚಾರು,ನಿರ್ದೇಶಕರುಗಳಾದಅಣ್ಣಿ ಪೂಜಾರಿ ಬೆಳ್ಳಾರೆ, ರಘುರಾಮ ಜಟ್ಟಿಪಳ್ಳ, ಧನಂಜಯ ಪಿ. ಎಸ್. ಗುತ್ತಿಗಾರು, ಕಮಲಾಕ್ಷ ಕಲ್ಲುಗುಂಡಿ, ವಾಸುದೇವ ಪೆರುಂಬಾರು, ಸಾಂತಪ್ಪ ಡಿ. ಜಯನಗರ, ನಾಗೇಶ ಕೇರ್ಪಳ, ವಸಂತ ಪರಿವಾರಕಾನ, ದಿನೇಶ ಬಾಚೋಡಿ, ಸೀತಾರಾಮ ಗೌಡ ಬೆಳ್ಳಾರೆ, ಬಾಲಕೃಷ್ಣ ನಿಶ್ಮಿತಾ, ಅಬ್ದುಲ್ ಬಶೀರ್, ಮಧುಚಂದ್ರ ಪಂಜ, ಹರೀಶ್ ಕೆ.ಮತ್ತು ಸಂಘದ
ಸದಸ್ಯರು ಸಹಕರಿಸಿದರು.