ಪುತ್ತೂರಿನಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಿದ ಉದ್ಯಮಿ ಪ್ರಶಾಂತ್ ರೈ ಮರುವಂಜ

0

ಮರುವಂಜ ವಿಷ್ಣು ಗ್ರೂಪ್ ಮಾಲಕ ಪ್ರಶಾಂತ್ ರೈ ಮರುವಂಜರವರು ವಿಶೇಷ ಪೂಜೆ ಮತ್ತು ಸೇವೆಯಾಗಿ ಪ್ರತೀ ವರ್ಷದಂತೆ 8ನೇ ಬಾರಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಳುನಾಡಿನ ವಿಶೇಷ ದಿನವಾದ ಪತ್ತನಾಜೆ ದಿನದಂದು ಶ್ರೀ ದೇವರ ಪಲ್ಲಕ್ಕಿ ಉತ್ಸವವನ್ನು, ತನಗೂ ನಾಡಿನ ಜನರ ಏಳಿಗೆಗಾಗಿ ಸೇವೆಯಾಗಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಅವರ ತಂದೆ ವಿಶ್ವನಾಥ ರೈ, ತಾಯಿ ಹೇಮಲತಾ ವಿ. ರೈ, ಪತ್ನಿ ಪ್ರವೀಣ. ಪಿ.ರೈ ಮರುವಂಜ ಹಾಗೂ ಪವನ್ ರೈ, ಹಿತ ರೈ, ಕುಟುಂಬಸ್ಥರು, ಗಣ್ಯರು ಹಾಗೂ ಭಕ್ತಾದಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.