ಕೊಲ್ಲಮೊಗ್ರ ಹರಿಹರ ಸೊಸೈಟಿ ಎದೆಗಾರಿಕೆಯ ಕೆಲಸ ಮಾಡಿದೆ

0

ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಶ್ಲಾಘನೆ

ಪೆಟ್ರೋಲ್ ಪಂಪ್ ಗೆ ಬ್ಯಾಂಕಿನಿಂದ ನೆರವು ನೀಡುವ ಭರವಸೆ

ಶತಮಾನ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಕೊಲ್ಲಮೊಗ್ರ ಹರಿಹರ ಸೊಸೈಟಿ ಜಾಗ ಖರೀದಿಸಿ ಪೆಟ್ರೋಲ್ ಪಂಪ್ ಆರಂಭಿಸುವ ನಿರ್ಧಾರ ಮಾಡುವ ಮೂಲಕ ಎದೆಗಾರಿಕೆಯ ಕೆಲಸ ಮಾಡಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಶ್ಲಾಘಿಸಿದ್ದಾರೆ.

ಸಹಕಾರಿ ಸಂಘದ ಶತ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೆಟ್ರೋಲ್ ಪಂಪ್ ಗೆ ಶಿಲಾನ್ಯಾಸ ಮಾಡಿದ ಅವರು, ಪೆಟ್ರೋಲ್ ಪಂಪ್ ಸ್ಥಾಪನೆಗೆ ಆರ್ಥಿಕ ನೆರವು ನೀಡುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಲ್ಲಿ ವಿನಂತಿ ಮಾಡಿದ್ದೇನೆ ಎಂದರು.

ಈ ಸಹಕಾರಿ ಸಂಘ ಸುಮಾರು 71 ಲಕ್ಷ ಡಿವಿಡೆಂಟ್ ಗಾಗಿ ಖರ್ಚು ಮಾಡುತ್ತದೆ. ಮುಂದಿನ ಮಹಾಸಭೆಯಲ್ಲಿ ಈ ಮೊತ್ತವನ್ನು ಪೆಟ್ರೋಲ್ ಪಂಪ್ ಕಾಮಗಾರಿಗೆ ನೀಡುವಂತೆ ನಿರ್ಣಯ ಕೈಗೊಳ್ಳಲು ಸದಸ್ಯರು ಹೃದಯ ಶ್ರೀಮಂತಿಕೆ ತೋರಬೇಕು ಎಂದು ಅವರು ವಿನಂತಿಸಿದರು.