ಮರ್ಕಂಜ : ಕಾವೂರು ದೇವಸ್ಥಾನದ ಅರ್ಚಕರಿಗೆ ಮಾಜಿ ಅರ್ಚಕರಿಂದ ಹಲ್ಲೆಗೆ ಯತ್ನ – ಪೋಲೀಸ್ ದೂರು

0

ಮರ್ಕಂಜದ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದ ಅರ್ಚಕರಿಗೆ ಅದೇ ದೇವಸ್ಥಾನದ ಮಾಜಿ ಅರ್ಚಕರು ರಾಡ್ ನಿಂದ ಹಲ್ಲೆಗೆ ಮುಂದಾದರೆನ್ನಲಾದ ಘಟನೆ ವರದಿಯಾಗಿದ್ದು, ಅರ್ಚಕರು ಪೋಲೀಸರಿಗೆ ದೂರು ನೀಡಿದ್ದಾರೆ.

ಮರ್ಕಂಜದ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯ ಎಂಬವರು ಸುಳ್ಯ ಪೋಲೀಸರಿಗೆ ದೂರು ನೀಡಿದ್ದು, “ನಾನು ತೊಡಿಕಾನದ ಮನೆಯಿಂದ ನನ್ನ ದ್ವಿಚಕ್ರ ವಾಹನದಲ್ಲಿ ಮೇ.30ರಂದು ಬೆಳಿಗ್ಗೆ 7.30ರ ವೇಳೆಗೆ ಎಂದನಂತೆ ಬೆಳಗ್ಗಿನ ಪೂಜೆ ಮಾಡಲು ದೇವಸ್ಥಾನಕ್ಕೆ ಬರುತ್ತಿರುವಾಗ ದೇವಸ್ಥಾನದ ದ್ವಾರದ ಹತ್ತಿರ ನಿಂತಿದ್ದ ಮರ್ಕಂಜ ಗ್ರಾಮದ ಸುಬ್ರಹ್ಮಣ್ಯ ನೆಲ್ಲಿತ್ತಾಯ ಎಂಬವರು ನನ್ನ ಮೇಲೆ ಹಲ್ಲೆ ನಡೆಸಲು ರಾಡ್ ಬೀಸಿದರು. ಅದು ನನ್ನ ದ್ವಿಚಕ್ರ ವಾಹನದ ಹೆಡ್ ಲೈಡ್ ತಾಗಿ ಅದು ಜಖಂ ಗೊಂಡಿದೆ. ಆ ವೇಳೆ ಮರ್ಕಂಜ ಕಡೆಯಿಂದ ಸುಳ್ಯ ಕಡೆಗೆ ಹೋಗುವ ಬಸ್ಸು ಬಂದುದರಿಂದ ಅವರು ಹೋದರೆಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಅರ್ಚಕ ರಾಮಕೃಷ್ಣ ಮಯ್ಯರ ದೂರನ್ನು ಪೋಲೀಸರು ಸ್ವೀಕರಿಸಿದ್ದರೂ ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ವ್ಯವಸ್ಥಾಪನಾ ಸಮಿತಿಯವರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.