ಗೃಹರಕ್ಷಕ ದಳದಿಂದ ಮಳೆಗಾಲ ಎದುರಿಸಲು‌ ಪೂರ್ವ ಸಿದ್ಧತಾ ಸಭೆ, ಪೂರ್ವ ಸಿದ್ಧತೆಯಿಂದ ಹಾನಿ ಕಡಿತ ಡಾ. ಚೂಂತಾರು

0

ಜೂ. 2ರಂದು ಜಿಲ್ಲಾ ಗೃಹರಕ್ಷಕ ದಳ ಸಮಾಧೇಷ್ಟರಾದ ಡಾ. ಮುರಳಿ ಮೋಹನ್ ಚೂಂತಾರ್ ರವರು ಸುಬ್ರಹ್ಮಣ್ಯ ಗೃಹರಕ್ಷಕ ದಳ ಕಚೇರಿಗೆ ಭೇಟಿ ನೀಡಿ ಮಳೆಗಾಲ ವಿಪತ್ತು ನಿರ್ವಹಣಾ ಕಾರ್ಯದ ಬಗ್ಗೆ ಮಾಹಿತಿ ನೀಡಿ ವಿಪತ್ತು ನಿರ್ವಹಣೆಯ ಅಗತ್ಯ ಪರಿಕರಣೆಗಳನ್ನು ವೀಕ್ಷಿಸಿದರು ಹಾಗೂ ಇನ್ನಿತರ ಅಗತ್ಯ ಇರುವ ಪರಿಕರಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು ಈ ಸಮಯದಲ್ಲಿ ಸುಬ್ರಮಣ್ಯ ಗೃಹರಕ್ಷಕ ದಳ ಪ್ರಭಾರ ಘಟಕ ಅಧಿಕಾರಿ ಹರಿಶ್ಚಂದ್ರ ಗೃಹರಕ್ಷಕರಾದ ಸುನಿಲ್, ಸಂಜಯ್, ನೇತ್ರಾ, ರವಿಚಂದ್ರ, ಪ್ರಕಾಶ್ ಹಾಗೂ ಇತರ ಗೃಹರಕ್ಷಕರು ಉಪಸ್ಥಿತರಿದ್ದರು.