ಜೇಸಿಐ ವಲಯ ಮಧ್ಯಂತರ ಸಮ್ಮೇಳನ- ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಔಟ್ ಸ್ಟ್ಯಾಂಡಿಂಗ್ ಲೋ ಪ್ರೆಸಿಡೆಂಟ್ ರನ್ನರ್ ಪ್ರಶಸ್ತಿ

0

ಜೂ.2ರಂದು ವಿಟ್ಲ ದಲ್ಲಿ ನಡೆದ ಜೇಸಿಐ ವಲಯ ಮಧ್ಯಂತರ ಸಮ್ಮೇಳನದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ಹಲವು ಪ್ರಶಸ್ತಿ ಲಭಿಸಿದೆ.

ಘಟಕಾಧ್ಯಕ್ಷ ಗುರುಪ್ರಸಾದ್ ನಾಯಕ್ ಇವರಿಗೆ ಯುವ ರತ್ನ ಪ್ರಶಸ್ತಿ, ರಜತ ಸಿಂಚನ ಪ್ರಶಸ್ತಿ, ಜೇಸಿ ಬೆಳ್ಳಿ ತಾರೆ ಪ್ರಶಸ್ತಿ, ಔಟ್ ಸ್ಟ್ಯಾಂಡಿಂಗ್ ಲೋ ಪ್ರೆಸಿಡೆಂಟ್ ರನ್ನರ್ ಪ್ರಶಸ್ತಿ , ಜೇಸಿ ಮಿನುಗುತಾರೆ ಪ್ರಶಸ್ತಿ ಲಭಿಸಿದೆ. ಘಟಕಕ್ಕೆ ಸಿಲ್ವರ್ ಲೋ ಪ್ರಶಸ್ತಿ, ಯುವ ದಿನಾಚರಣೆ, ಹಸಿರು ಸಮೃದ್ಧಿ, ಹೊದಿಗೆ ಕಾರ್ಯಕ್ರಮ ಚುನಾವಣೆ ಜಾಗೃತಿ ಸೆಲ್ಯೂಟ್ ದೀ ಸ್ಟಾರ್ ಸಾಧಕರಿಗೆ ಸನ್ಮಾನ ಮುಂತಾದ ಕಾರ್ಯಕ್ರಮಗಳನ್ನು ಸಂಘಟಿಸಿತ್ತು. ಗುರುಪ್ರಸಾದ್ ನಾಯಕ್ ಹಾಗೂ ಜೇಸಿಐ ಉಪಾಧ್ಯಕ್ಷೆ ಶಶ್ಮಿ ಭಟ್ ಪ್ರಶಸ್ತಿಗಳನ್ನು ಸ್ವೀಕರಿಸಿದರು.

ಜೇಸಿ ಅಶೋಕ್ ಚೂಂತಾರು, ಶಶ್ಮಿ ಭಟ್ ಅಜ್ಜಾವರ, ನವೀನ್ ಅಜ್ಜಾವರ , ಗುರುರಾಜ್ ಅಜ್ಜಾವರ , ಅಶ್ವಿನಿ, ಸುರೇಶ್ ಕಾಮತ್. ಗೀತಾಂಜಲಿ ಅಜ್ಜಾವರ ಇತರ ಸದಸ್ಯರು ಭಾಗವಹಿಸಿದ್ದರು.