ಕ್ಯಾಂಪ್ಕೋ ನಿಯಮಿತ ಸಂಸ್ಥೆಯಿಂದ ಸದಸ್ಯ ಬೆಳೆಗಾರರಿಗಾಗಿ ಸಹಾಯಧನ ವಿತರಣೆ

0

ಮಂಗಳೂರು ಕ್ಯಾಂಪ್ಕೋ ನಿಯಮಿತ ಸಂಸ್ಥೆಯಿಂದ ಸದಸ್ಯ ಬೆಳೆಗಾರರಿಗಾಗಿ ರೂಪಿಸಲಾದ ವಿವಿಧ ಸಹಾಯಧನ ಯೋಜನೆಗಳಡಿಯಲ್ಲಿ ಪ್ರಥಮ ಬಾರಿಗೆ ಸಂಸ್ಥೆಯ ಸಕ್ರಿಯ ಸದಸ್ಯರ ಕುಟುಂಬದವರ ಕೃಷಿ ವಿಜ್ಞಾನಕ್ಕೆ ಸಂಬಂದಿಸಿದ ಉನ್ನತ ಶಿಕ್ಷಣಕ್ಕಾಗಿ ನೀಡಲಾಗುವ ಒಂದು ಲಕ್ಷ ರೂಪಾಯಿ (Rs. 100000)ಮೊತ್ತದ ಸಹಾಯಧನದ ಎರಡನೇ ಕಂತಿನ ಹಣ ಐವತ್ತು ಸಾವಿರ ರೂಪಾಯಿ (Rs.50000) ಯ ಚೆಕ್ಕನ್ನು ಕ್ಯಾoಪ್ಕೋ ಸಂಸ್ಥೆಯ ನಿಂತಿಕಲ್ ಶಾಖೆಯ ಸಕ್ರಿಯ ಸದಸ್ಯರಾದ ಲಕ್ಷ್ಮಿನಾರಾಯಣ ನಡ್ಕರವರ ಪುತ್ರಿಯ ಕೃಷಿ ವಿಜ್ಞಾನದಲ್ಲಿಯ MSc ಸ್ನಾತಕೋತ್ತರ ಶಿಕ್ಷಣಕ್ಕಾಗಿ ಜೂ.01 ರಂದು ಕ್ಯಾಂಪ್ಕೋ ನಿಂತಿಕಲ್ ಶಾಖೆಯಲ್ಲಿ ನಮ್ಮ ಸಂಸ್ಥೆಯ ಗೌರವಾನ್ವಿತ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ರವರು ಲಕ್ಸ್ಮಿನಾರಾಯಣ ನಡ್ಕರವರಿಗೆ ಹಸ್ತಾoತರಿಸಿದರು.

ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಪ್ರಾದೇಶಿಕ ಪ್ರಭಂದಕರಾ ದ ಪ್ರಕಾಶ್ ಶೆಟ್ಟಿ, ನಿಂತಿಕಲ್ ಶಾಖಾ ಪ್ರಭಂದಕರಾದ ರಮೇಶ್. ಡಿ. ಹಾಗೂ ಸಿಬ್ಬಂದಿಗಳಾದ ರಮೇಶ್ ಕುಮಾರ್ ವಿ. ಮತ್ತು ಆಕಾಶ್ ಎಮ್ ಶೆಟ್ಟಿ ಹಾಗೂ ತ್ರಿ ಮುಖ್ ಹೆಗಡೆ ಉಪಸ್ಥಿತರಿದ್ದರು