ದ.ಕ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಹಿನ್ನೆಲೆ

0

ಸೋಣಂಗೇರಿಯಲ್ಲಿ ಭಾ.ಜ.ಪ ಕಾರ್ಯಕರ್ತರಿಂದ ಸಂಭ್ರಮಾಚರಣೆ

ದೇಶದ 18ನೇ ಲೋಕಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರು ಅತ್ಯಧಿಕ ಬಹುಮತಗಳಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಜಾಲ್ಸೂರು ಗ್ರಾಮದ ಸೋಣಂಗೇರಿಯಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಜೂ.5ರಂದು ಸಂಭ್ರಮಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರುಗಳಾದ ಗಂಗಾಧರ ರೈ ಸೋಣಂಗೇರಿ, ಧನಂಜಯ ಕುಕ್ಕನ್ನೂರು, ಚಿದಾನಂದ ಗೋಪಾಲಕಜೆ, ಯೋಗೀಶ ಎಸ್.ಕೆ., ಗ್ರಾ.ಪಂ. ಸದಸ್ಯರಾದ ಈಶ್ವರ ನಾಯ್ಕ ಸೋಣಂಗೇರಿ, ಶಿವಪ್ರಸಾದ್ ನೀರಬಸಿರು, ಶ್ಯಾಮ್ ಸುಂದರ್ ಮಿತ್ತಮಜಲು, ಜಗದೀಶ್ ಹುಲಿಮನೆ, ಗಂಗಾಧರ ಹುಲಿಮನೆ, ವಿನಯಚಂದ್ರ ನಡುಬೆಟ್ಟು, ಯಶವಂತ ನಡುಬೆಟ್ಟು, ಪ್ರಶಾಂತ್ ಮಿತ್ತಮಜಲು, ಜಯಚಂದ್ರನ್ ಸೋಣಂಗೇರಿ, ಗಿರೀಶ್ ಕುಮಾರ್ ಕುಕ್ಕನ್ನೂರು, ಬಾಲಕೃಷ್ಣ ಸೋಣಂಗೇರಿ, ಗಣೇಶ್ ಹುಲಿಮನೆ, ಆನಂದ ಕುಂಟಿಕಾನ, ರಾಧಾಕೃಷ್ಣ ದೋಳ್ತಿಲ, ಚಂದ್ರ ಸೋಣಂಗೇರಿ, ದೀಕ್ಷಿತ್ ನಡುಬೆಟ್ಟು, ಚಿನ್ನಯ್ಯ ಆಚಾರ್ಯ , ಭಾಸ್ಕರ ಭರತ್ ನಾಯಕ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.