ಹರಿಹರ ಪ್ರಾ.ಕೃ.ಪ.ಸ. ಸಂಘದ ನಿವೃತ್ತ ಸಿ.ಇ.ಒ ವಾಸಪ್ಪ ಗೌಡ ಮಡ್ತಿಲರಿಗೆ ಶ್ರದ್ಧಾಂಜಲಿ ಸಭೆ

0

ಮೇ. 27ರಂದು ನಿಧನರಾದ ಹರಿಹರ ಪ್ರಾ.ಕೃ.ಪ.ಸ. ಸಂಘದ ನಿವೃತ್ತ ಸಿ.ಇ.ಒ ವಾಸಪ್ಪ ಗೌಡ ಮಡ್ತಿಲರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಜೂ. 6ರಂದು ಮಡ್ತಿಲದಲ್ಲಿ ನಡೆಯಿತು. ಕೆ.ವಿ.ಜಿ. ಐಐಟಿ ಹಿರಿಯ ತರಬೇತುದಾರರಾದ ದಿನೇಶ್ ಮಡ್ತಿಲ ಮೃತರಿಗೆ ನುಡಿನಮನ ಸಲ್ಲಿಸಿದರು. ಮೃತರು ಪುತ್ರರಾದ ಬೆಂಗಳೂರಿನಲ್ಲಿ ಇಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಆಗಿರುವ ಮಹೇಶ್ ಕುಮಾರ್ ಮಡ್ತಿಲ, ಸುಳ್ಯ ಕಾರ್ ಶೃಂಗಾರ್ ಮಾಲಕರಾದ ಅರುಣ್ ಕುಮಾರ್ ಮಡ್ತಿಲ, ಪುತ್ರಿ ಶ್ರೀಮತಿ ಜಲಜಾಕ್ಷಿ ನೇಮಿರಾಜ್ ಕಾಂಪಾರು ಕೆಂಜಾಲ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೃತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.