ಆದಿತ್ಯ ಬಾಳೆಗುಂಡಿಗೆ ಎಸ್.ಎಸ್.ಎಲ್.ಸಿ.ಯಲ್ಲಿ 587 ಅಂಕ

0

2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾಮದ ಬಾಳೆಗುಂಡಿಯ ಆದಿತ್ಯ 587 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾನೆ. ಮೊದಲ ಬಾರಿ ಫಲಿತಾಂಶ ಬಂದಾಗ 575 ಅಂಕ ಬಂದಿತ್ತು. ಬಳಿಕ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಿದ್ದರು. ಇದೀಗ ನಿನ್ನೆ ಅದರ ಫಲಿತಾಂಶ ಬಂದಿದ್ದು 12 ಅಂಕ ಹೆಚ್ಚುವರಿ ಬಂದು 587 ಅಂಕ ಬಂದಿದೆ.

ಆದಿತ್ಯ ನೆಲ್ಲೂರು ಕೆಮ್ರಾಜೆ ಗ್ರಾಮದ ಬಾಳೆಗುಂಡಿ ನಾರಾಯಣ ಮತ್ತು ವಿಶಾಲಾಕ್ಷಿ ದಂಪತಿಗಳ ಪುತ್ರ. ಸೌಜನ್ಯ ಸಹೋದರಿ.

ಮಂಗಳೂರಿನ ಚಿನ್ಮಯ ಹೈಸ್ಕೂಲ್ ನ ವಿದ್ಯಾರ್ಥಿ.

ಪ್ರಸ್ತುತ ಮಂಗಳೂರಿನಲ್ಲಿ‌ ನೆಲೆಸಿದ್ದಾರೆ.