ಡಾ| ರೇವತಿ ನಂದನ್ ರವರ `ತೋಟದ ಲೋಕದ ಪಾಠಗಳು’ಕೃತಿಗೆ ಭಾಗ್ಯ ನಂಜಪ್ಪ ದತ್ತಿನಿಧಿ ಪ್ರಶಸ್ತಿ

0

ಕರ್ನಾಟಕ ಲೇಖಕಿಯರ ಸಂಘದ ೨೦೨೩ನೇ ಸಾಲಿನ ದತ್ತಿನಿಧಿ ಪ್ರಶಸ್ತಿಗಳು ಪ್ರಕಟವಾಗಿದ್ದು ಅದರಲ್ಲಿ ಭಾಗ್ಯ ನಂಜಪ್ಪ' (ವಿಜ್ಙಾನ ಸಾಹಿತ್ಯ) ದತ್ತಿನಿಧಿ ಪ್ರಶಸ್ತಿಗೆ ನಿವೃತ್ತ ಪ್ರಾಂಶುಪಾಲೆ ಸುಳ್ಯದ ಡಾ| ರೇವತಿ ನಂದನ್‌ರವರ ತೋಟದ ಲೋಕದ ಪಾಠಗಳು (ಕರ್ನಾಟಕ ರಾಜ್ಯ ವಿಜ್ಙಾನ ಪರಿಷತ್ತು ಬೆಂಗಳೂರು ಇವರು ಪ್ರಕಟಿಸಿದ) ಕೃತಿ ಭಾಜನವಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಜೂ.೨೩ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಡೆಯಲಿದೆ.

ಪ್ರಶಸ್ತಿಯು ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿದೆ. ತೋಟದ ಲೋಕದ ಪಾಠಗಳು’ ಕೃತಿಯು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕರ್ನಾಟಕ ಸರಕಾರದಿಂದ ಶ್ರೇಷ್ಠ ಪುಸ್ತಕ ಪ್ರಶಸ್ತಿ ೨೦೨೦-೨೧ನೇ ಸಾಲಿನಲ್ಲಿ ಪ್ರಕಟಗೊಂಡಿತ್ತು. ಇವರು ಸುಳ್ಯದ ನ್ಯಾಯವಾದಿ ಎ.ಸಿ. ನಂದನ್ ರ ಪತ್ನಿ.